ಮಂಗಳೂರು: ಮಂಗಳೂರಿನ ನೆಹರೂ ಮೈದಾನದ ಅದ್ದೂರಿ ವೇದಿಕೆ. ಬಣ್ಣ ಬಣ್ಣದ ಬೆಳಕಿನ ಚಿತ್ತಾರದ ನಡುವೆ ಇಂಪಾದ ಹಾಡುಗಳ ನಿನಾದ. ಇದಕ್ಕೆ ಸಂಗೀತ ಪ್ರಿಯರ ಮುಗಿಲು ಮುಟ್ಟಿದ ಕರತಾಡನ. ಜತೆಗೆ ತಂಪಾದ ಹನಿ ಹನಿ ಮಳೆ ಸಿಂಚನ. ಒಟ್ಟಿನಲ್ಲಿ ಭಾನುವಾರ ನೆಹರೂ ಮೈದಾನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯರ ಸಂಗೀತರಸ ಸಂಜೆ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
Arjun250913_m
ರೇಡಿಯೋ ಮಿರ್ಚಿ ಮತ್ತು ವಿಜಯ ಕರ್ನಾಟಕ ದಿನಪತ್ರಿಕೆ ಸಹಯೋಗದಲ್ಲಿ ಆಯೋಜನೆಗೊಂಡ ‘ಸೂಪರ್ ಹಿಟ್ ನೈಟ್ಸ್ ಸೂಪರ್ ಮಸ್ತಿ’ ಗಾನ, ನೃತ್ಯ,ವೈವಿಧ್ಯಮ ಪ್ರದರ್ಶನದ ಮೂಲಕ ಮಂಗಳೂರಿನ ಸಂಗೀತ ಪ್ರಿಯರ ಮನ ಗೆದ್ದಿತು.

ತಂಪಾದ ಗಾಳಿ ಬೀಸಿ ಮಳೆ ಸಿಂಚನ ವಾಗುತ್ತಿದ್ದಂತೆ ಕಾರ್ಯಕ್ರಮ ‘ವಕ್ರತುಂಡ ಮಹಾಕಾಯ…’ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಬಳಿಕ ಅನುರಾಧ ಭಟ್ ಅವರ ‘ನಂದ ನಂದ ನಾ..ನೀನು ಶ್ರೀ ಕೃಷ್ಣ…’ ಇಂಪಾದ ಹಾಡಿನೊಂದಿಗೆ ಗಾನ ಬಜಾನಾ ಆರಂಭಗೊಂಡಿತು. ಮುಂದುವರಿದು ‘ಮಧುರಾ ಪಿಸು ಮಾತಿಗೆ…’ ‘ಬಂಟರ ಬಂಟ…. ತುಂಟರ ತುಂಟಾ…’ ಹಾಡಿನೊಂದಿಗೆ ಸಂಗೀತ ರಸದೌತಣಕ್ಕೆ ಡಾ. ಶಮಿತಾ ಮಲ್ನಾಡ್ ವೇಗ ನೀಡಿದರು.

ಕಪ್ಪು ಪ್ಯಾಂಟ್, ಬಿಳಿ ಅಂಗಿ ಅದರಮೇಲೊಂದು ಕೋಟು, ಬಿಟ್ಟ ಕೂದಲಿನೊಂದಿಗೆ ಬೈಕ್‌ನಲ್ಲಿ ಆಕರ್ಷಕ ರೀತಿಯಲ್ಲಿ ‘ಜೈ ಜೈ ಜೈ ಭಜರಂಗಿ ಹಾಡಿನೊಂದಿಗೆ ಸ್ಟೇಜ್‌ಗೆ ಎಂಟ್ರಿಯಾದರು ಸ್ಟಾರ್ ಸಂಗೀತನಿರ್ದೇಶಕ ಅರ್ಜುನ್ ಜನ್ಯ. ಈ ಸಂದರ್ಭ ಪಟಾಕಿಗಳ ಚಿತ್ತಾರ, ನೆರಳು ಬೆಳಕಿನಾಟ ಪ್ರೇಕ್ಷಕರನ್ನು ಮಾಯಾ ಲೋಕಕ್ಕೆ ಕೊಂಡೊಯ್ಯಿತು. ನಂತರಮೈಕಲ್ ಜಾಕ್ಸನ್…., ಮಾಮ….ಮಾಮ…ಖಾಲಿ ಕ್ವಾಟ್ರು ಬಾಟ್ಲು…ಹೀಗೆ ನಾನಾ ಹಾಡುಗಳಿಂದ ಪ್ರೇಕ್ಷಕರ ಮನ ಗೆದ್ದರು.

ಕೇಕೆ ನಡುವೆ ಹೆಜ್ಜೆ..: ಸಾಕಷ್ಟು ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು ಹಾಡಿಗೆ ಕೇಕೆ ಹಾಕಿದರೆಲ್ಲದೆ, ಕೆಲವರು ಹೆಜ್ಜೆಯ ಮೇಲೆ ಹೆಜ್ಜೆಇ ಟ್ಟು ಕುಣಿದಾಡಿದರು. ಇದೇ ಸಂದರ್ಭ ಉದ್ಯಮಿ ರಮೇಶ್ ನಾಯಕ್ ಅವರು ಅರ್ಜುನ್ ಜನ್ಯ ಅವರಿಗೆ ಹೂ ಗುಚ್ಛನೀಡಿ ಸ್ವಾಗತಿಸಿದರು. ಆರ್. ಜೆ. ಅರ್ಪಿತ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *