ಮಂಗಳೂರು: ಕೆ.ರೋಡ್ ಹಲ್ಲೆ ಪ್ರಕರಣದ ಮುಂದುವರಿದ ಭಾಗವಾಗಿ ತೊಕ್ಕೊಟ್ಟುವಿನ್ನಲಿ ಒಟ್ಟು 13 ಅಂಗಡಿಗಳಿಗೆ ಸರಣಿ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ಇಂದು ತಡರಾತ್ರಿ ಸಂಭವಿಸಿದೆ. ಕಿಡಿಗೇಡಿಗಳು ಅಂಗಡಿಗೆ ಬೆಂಕಿ ಹಚ್ಚಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇರ್ಫಾನದ್ ಅವರ ಪ್ಲಾಸ್ಟಿಕ್ ಅಂಗಡಿ, ಇದಾ, ಇಬ್ರಾಹಿಂ ಹಾಗೂ ಬಾವಾ ಅವರ ಮೂರು ತರಕಾರಿ ಅಂಗಡಿ, ಭಗವಾನ್ ದಾಸ್, ಲತೀಫ್, ಮನ್ಸೂರು ಅವರ ಸಾಮಗ್ರಿ ಅಂಗಡಿ, ರಫೀಕ್ ಅವರ ಚಪ್ಪಲ್ ಅಂಗಡಿ, ಮೋನು ಅವರ ಒಣಮೀನಿನ ಅಂಗಡಿ, ಮುಸ್ಥಾಫಾ ಅವರ ಗೊಂಬೆ ಅಂಗಡಿ, ಇಬ್ರಾಹಿಂ, ಇದಾ ಅವರ ಹೂವಿನಂಗಡಿ, ಅಜೀಝ್ ಅವರ ಜವಳಿ ಅಂಗಡಿ ಅಂಗಡಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ರಾತ್ರಿ 9 ರ ಸುಮಾರಿಗೆ ಬೆಂಕಿ ಹಚ್ಚಿದ್ದು ಅದನ್ನು ನಂದಿಸಲು ಸಾಧ್ಯವಾಗಿಲ್ಲ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿದ್ದರು.






