ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ದೇವಳದ ಸುತ್ತುಪೌಳಿ ರಥಬೀದಿಗೆ ನಾಬರ್ಡ್ ಅರ್ ಐ ಡಿಎಪ್ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸುಮಾರು 1 ಕೋಟಿ 32 ಲಕ್ಷದ ಅನುದಾನವನ್ನು ಅರಣ್ಯ ಸಚಿವ ರಮಾನಾಥ ರೈ ಅವರು ನೀಡಿ ಅದರ ಶಿಲಾನ್ಯಸವನ್ನು ಜ.12 ರಂದು ಪೊಳಲಿಯಲ್ಲಿ ನೆರವೇರಿಸಿದರು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ವಹಿಸಿದ್ದರು. ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಪ್ರಧಾನ ಅರ್ಚಕ ಮಾಧವ ಭಟ್,ಆಡಳಿತ ಮೊಕ್ತೆಸರ ಡಾ. ಮಂಜಯ್ಯ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ಯುನಿಕ್ ಕಂಸ್ಟ್ರಕ್ಷನ್ ಪಿಡಬ್ಲ್ಯೊಡಿ ಎಇಇ ಉಮೇಶ್ ಭಟ್ ಪ್ರಾಸ್ತವಿಕವಾಗಿ ಮಾತನಾಡಿ ರಸ್ತೆಯ ಕಾಮಗಾರಿ ಆರಂಭವಾಗಿ ಮಾ. 5ರ ಒಳಗೆ ಕಾಮಗಾರಿಯನ್ನು ಪೂರ್ತಿ ಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು.
ಪ್ರವಾಸೋಧ್ಯಮ ಇಲಾಖೆಯ ಸಹಯಾಕ ನಿರ್ಧೇಶಕ ಪ್ರಭಾಕರ,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ ಗುತ್ತಿಗೆದಾರರಾದ ಚಂದ್ರಶೇಖರ ಶೆಟ್ಟಿ, ಸುಂದರ ಶೆಟ್ಟಿ, ಪಿಡಿಓ ನವೀನ್ ಭಂಡಾರಿ, ಉಪಧ್ಯಕ್ಷೆ ವೀಣಾ ಆಚಾರ್ಯ, ಉಮೇಶ್ ಆಚಾರ್ಯ, ಬಸೀರ್ ಬಡಕಬೈಲ್, ಜಯರಾಮ್ ಕೃಷ್ಣ ಪೊಳಲಿ, ಅರ್ಚಕ ರಾಮ್ ಭಟ್, ಚಂದ್ರಶೇಖರ ರಾವ್, ಚಂದ್ರಶೇಖರ ಭಂಡಾರಿ ಸ್ವಾಗತಿಸಿ ಕರಿಯಂಗಳ ಗ್ರಾಮ ಪಂ.ಸದಸ್ಯ ರಾಜು ಪೂಜಾರಿ ಧನ್ಯವಾದವಿತ್ತರು ಅಬ್ದುಲ್ ಹಕಿಂ ಕಾರ್ಯಕ್ರಮ ನಿರೂಪಿಸಿದರು.























