ಬಂಟ್ವಾಳ : ತಾಲೂಕಿನ  ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಂಭೂರು ಗ್ರಾಮದಲ್ಲಿರುವ ವ್ಯಾಯಾಮ ಶಾಲೆಯ ನೂತನ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ ಬುಧವಾರ ನೆರವೇರಿಸಲಾಯಿತು.

ಬಂಟ್ವಾಳ ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ ರವರ  ಸಲಹೆ ಮೇರೆಗೆ ಸುಮಾರು ಅಂದಾಜು 20 ಲಕ್ಷ ರೂ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣವಾಗಲಿದ್ದು 
ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಸಂತೋಷ್ ಕುಮಾರ್  ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ನೀಲಮ್ಮ ಟೀಚರ್ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ  ಲೀಲಾವತಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ  ತ್ರಿವೇಣಿ,  ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ  ಕೃಷ್ಣ ನಾಯ್ಕ ಹೆಚ್, ಕಾರ್ಯದರ್ಶಿ  ಅಶ್ರಫ್ , ಪಂಚಾಯತ್ ಸದಸ್ಯರಾದ  ಹೇಮಲತಾ, ಸವಿತಾ,  ಪ್ರಕಾಶ್,  ಯೋಗೀಶ್,  ಸುಜಾತ,  ಪ್ರಕಾಶ್ ಕೋಡಿಮಜಲು,  ರಂಜಿತ್ ಕೆದ್ದೇಲ್,  ಕಿಶೋರ್ ಶೆಟ್ಟಿ,  ಉಷಾಲಾಕ್ಷಿ,  ಶುಭ,   ಅಂಗನವಾಡಿ ಕಾರ್ಯಕರ್ತೆ ಗುಲಾಬಿ, ಆಶಾ ಕಾರ್ಯ ಕರ್ತೆಯರು,ಅಂಗನವಾಡಿ ಸಹಾಯಕಿ, ಮಕ್ಕಳ ಪೋಷಕರು ಮತ್ತು ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *