ಬಂಟ್ವಾಳ: ತಾಲ್ಲೂಕಿನ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬಿ.ಸಿ.ರೋಡ್ನ ಗಾಣದಪಡ್ಪುವಿನಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಾದ ಅವಿನಾಶ್, ನೇಹಾ, ಅಶ್ವಿನಿ, ಸ್ವಾತಿ, ಶ್ರುತಿ ಮತ್ತು ಪ್ರತಿಭಾ ಇವರನ್ನು ಉನ್ನತ ಶಿಕ್ಷಣಕ್ಕಾಗಿ ದತ್ತು ಸ್ವೀಕರಿಸಲಾಯಿತು. ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ಗಿರೀಶ್ ಪೂಜಾರಿ ಬಸ್ರ, ಬೇಬಿ ಕುಂದರ್ ಬಾಂಬಿಲ, ರಾಜೇಶ್ ಸುವರ್ಣ ಮತ್ತಿತರರು ಇದ್ದರು.

