ಮಂಗಳೂರು: ಇಂಗ್ಲೀಷ್ ಭಾಷೆಯಲ್ಲಿ ಮ್ಯಾಂಗಲೋರ್ ಎಂದು ಕರೆಯುತ್ತಿದ್ದ ಕಡಲ ತಡಿಯ ಊರನ್ನು ಉನ್ನುಮುಂದೆ ಹಾಗೆ ಕರೆಯೋ ಆಗಿಲ್ಲ ಇನ್ನೇನಿದ್ದರು ಅಚ್ಛಕನ್ನಡದಲ್ಲಿ ಮಂಗಳೂರು ಎಂದೇ ಸಂಬೋಧಿಸಬೇಕು. ಹೌದು! ಇದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನರ್ಾಟಕ ಸರಕಾರ ಜಾರಿಗೊಳಿಸಿದ ಹೊಸ ನಿಯಮ.
ಕನ್ನಡ ರಾಜ್ಯೋತ್ಸವಕ್ಕೆ ಸರಕಾರ ನೀಡುತ್ತಿರುವ ಕೊಡುಗೆಯಾಗಿ, ಕೇವಲ ಮಂಗಳೂರು ಮಾತ್ರವಲ್ಲದೇ ರಾಜ್ಯದ 12 ಜಿಲ್ಲೆಗಳ ಹೆಸರನ್ನು ಸಹ ಬದಲಾವಣೆ ಮಾಡುವ ಆದೇಶವನ್ನು ಶುಕ್ರವಾರ ತಡರಾತ್ರಿಯೇ ಸರಕಾರ ಅಧಿಕೃತವಾಗಿ ಹೊರಡಿಸಿದೆ.
ಸರಕಾರಿ ಆದೇಶದ ಪ್ರಕಾರ ಗುಲ್ಬರ್ಗ ಹೆಸರು ಕಲ್ಬುಗರ್ಿ ಎಂದು, ಬಿಜಾಪುರದ ಹೆಸರು ವಿಜಾಯಾಪುರ ಎಂದು, ಬೆಳಗಾಂವ್ ಹೆಸರು ಬೆಳಗಾವಿ ಎಂದು ಬದಲಾಯಿಸಲಾಗಿದೆ. ಕನರ್ಾಟಕದ ಹಲವು ನಗರಗಳ ಹೆಸರನ್ನು ಬದಲಾಯಿಸಲು ಸರಕಾರ ಸಲ್ಲಿಸಿದ್ದ ಪ್ರಸ್ತಾಪನೆಗೆ ಕೇಂದ್ರ ಸರಕಾರ ಕೆಲವು ದಿನಗಳ ಹಿಂದೆ ಒಪ್ಪಿಗೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಈ ಹೆಸರುಗಳನ್ನು ಬದಲಾಯಿಸಲಾಗಿದೆ.


