ಮೂಡುಬಿದಿರೆ: ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಶನಿವಾರ ಸಾಯಂಕಾಲ ಪುತ್ತಿಗೆ ವಿವೇಕಾನಂದನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯಿತು. ತುಳುನಾಡಿನ ಸಮಪ್ರದಾಯದಂತೆ ಬಲೀಂದ್ರ ಪೂಜೆ, ಗೋ ಪೂಜೆ, ಲಕ್ಷ್ಮಿ ಪೂಜೆ, ಸರಸ್ವತಿ ಪೂಜೆ ಸಹಿತ ಅಚರಣೆ ನಡೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದಲ್ಲಿ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ದೀಪಾವಳಿಯಂತಹ ಕಾರ್ಯಕ್ರಮಗಳನ್ನು ಆಳ್ವಾಸ್ ನಲ್ಲಿ ಆಯೋಜಿಸುತ್ತಿದ್ದೇವೆ. ದೇಶಿಯತೆಯ ಸೌಂದರ್ಯ ಪ್ರಜ್ಞೆ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಮೂಡಬೇಕು. ದೇಶಿಯತೆಯಿಂದ ಪರಿಕಲ್ಪನೆಯಿಂದ ವ್ಯಕ್ತಿತ್ವ ರೂಪಿಸಲು ಸಾಧ್ಯ.
ಸಾಂಕ್ರಮಿಕ ರೋಗಗಳ ಈ ಸಂದರ್ಭದಲ್ಲಿ ಎಲ್ಲಾ ಸವಾಲುಗಳನ್ನು ಎದುರಿಸಿ ನಮ್ಮನ್ನು ನಾವು ಸಿದ್ದತೆ ಗೊಳಿಸಿ ಎಲ್ಲಾ ಹಬ್ಬಗಳನ್ನು ಆಚರಿಸುವಂತಾಗಬೇಕು. ಇದಲ್ಲದೆ ಅಖಿಲ ಭಾರತ ಮಟ್ಟದ ಅಥ್ಲೆಟಿಕ್ ಕೂಟವನ್ನು ಆಯೋಜಿಸುವುದಲ್ಲದೆ ಅಳ್ವಾಸ್ ನುಡಿಸಿರಿ ವಿರಾಸತನ್ನು ಮತ್ತೆ ಮಾಡಲಾಗುವುದು ಎಂದರು. ಉದ್ಯಮಿ ಕೆ.ಶ್ರೀಪತಿ ಭಟ್, ನವನೀತ್ ಶೆಟ್ಟಿ ಕದ್ರಿ ಉಪಸ್ಥಿತರಿದ್ದರು.



