ಮುಂಬಯಿ: ಅಪ್ರತಿಮ ಸಮಾಜ ಸೇವಕ, ಮೊಗವೀರ ಬ್ಯಾಂಕ್ನ ಕಾರ್ಯಧ್ಯಕ್ಷ ಸದಾನಂದ ಕೋಟ್ಯಾನ್ (೭೫.) ನ.೦೧ರಂದು ಸೋಮವಾರ ಸಂಜೆ ಬೋರಿವಿಲಿ ಪೂರ್ವದ ದೌಲತ್ ನಗರದಲ್ಲಿನ ರವಿಕುಂಜ್ ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರದರು. ಮೃತರು ಪತ್ನಿ, ಓರ್ವ ಸುಪುತ್ರ ಮತ್ತು ಸುಪುತ್ರಿ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಮೂಲ್ಕಿ ಚರಂಟಿಪೇಟೆ (ಹೆಜಮಾಡಿಕೋಡಿ) ಮೂಲತಃ ಮೃತರು ಮೊಗವೀರ ಯುವಕ ಸಂಘ (ಫೋರ್ಟ್) ಮುಂಬಯಿ ಇದರ ಅಧ್ಯಕ್ಷರಾಗಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಇದರ ಸಂಯೋಜಕರಾಗಿ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ ಇದರ ಮುಂಬಯಿ ನಿಧಿ ಸಂಗ್ರಹ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಾನುರೆಣಿಸಿದ್ದರು.
