ವಿಟ್ಲ: ಸುವರ್ಣ ವರ್ಷಾಚರಣೆ ಆಚರಿಸುತ್ತಿರುವ ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ವಿಟ್ಲ ಪಡ್ನೂರು ಗ್ರಾಮದ ಕಡಂಬು ಕುರ್ನ್ಯ ನಿವಾಸಿ ಮೋನಪ್ಪ ಪೂಜಾರಿಯವರ ಮನೆಗೆ ತೆರಳಿ ಹತ್ತು ಸಾವಿರದ ಚೆಕ್, ೩೫ ಕಿಲೊ ಅಕ್ಕಿ ಮತ್ತು ಒಂದು ತಿಂಗಳ ಇತರ ದಿನಸೀ ಸಾಮಾನುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಉಪಾಧ್ಯಕ್ಷ ಸುದೇಶ್ ಭಂಢಾರಿ, ಕೋಶಾಧಿಕಾರಿ ಗಂಗಾಧರ್, ಮಾಜಿ ಪ್ರಾಂತೀಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ ಮತ್ತು ಸದಸ್ಯ ರವಿಶಂಕರ್ ಉಪಸ್ಥಿತರಿದ್ದರು.
