ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಾಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳೋಂದಿಗೆ ಫೆ.17 ರಂದು ಬುಧವಾರ ದೇವರುಗಳಿಗೆ ಶ್ರೀ ರಾಜರಾಜೇಶ್ವರೀ .ಶ್ರೀ ಸುಬ್ರಹ್ಮಣ್ಯ, ಶ್ರೀ ವಿನಾಯಕ, ಶ್ರೀ ಭದ್ರಕಾಳಿ ದೇವರುಗಳ ಬೆಳಗ್ಗೆ 8.22ರಿಂದ 8.52 ಕ್ಕೆ ಮೀನ ಲಗ್ನ ಸುಮೂಹೂರ್ತದ ಜೀವಕಲಶಾಭಿಷೇಕ ನಡೆಯಿತು., ಹಾಗೂ ಶ್ರೀ ಕ್ಷೇತ್ರಪಾಲನ ಬಿಂಬಪ್ರತಿಷ್ಠೆ, ಶ್ರೀ ಮಗೃಂತಾಯ ದೈವದ ಪ್ರತಿಷ್ಠೆ , ಅಭಿಷೇಕವು ಪೊಳಲಿ ಕೃಷ್ಣ ತಂತ್ರಿ ಗಳ ನೇತೃತ್ವದಲ್ಲಿ ನಡೆಯಿತು.
ಕಾಲ ಪ್ರಸನ್ನಪೂಜೆ, ಶ್ರೀ ಕ್ಷೇತ್ರಪಾಲ ಬಿಂಬಪ್ರತಿಷ್ಠೆ, ಶ್ರೀ ಮಗೃಂತಾಯ ದೈವದ ಪ್ರತಿಷ್ಠೆ ಹಾಗೂ ಮದ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.ಸಾಯಾಂಕಾಲ 4.30ಕ್ಕೆ: ಭದ್ರಕಾಳಿ ಮಂಡಲ ಪೂಜೆ, ವನದುರ್ಗಾಹವನ, ಶ್ರೀ ಕೊಡಮಣಿತ್ತಾಯ ದೈವಕ್ಕೆ 25 ಕಲಶಾಧಿವಾಸ, ಅಧಿವಾಸಹವನ, ಪ್ರಸನ್ನಪೂಜೆ ವೈಧಿಕ ವಿಧಿವಿಧನಗಳೋಂದಿಗೆ ಕ್ಷೇತ್ರದ ತಂತ್ರಿ ಸುಬ್ರಹ್ಮಣ್ಯ ,ವೇಂಕಟೇಶ್ ತಂತ್ರಿಗಳ ನೇತೃತ್ವದಲ್ಲಿ ದೇವಾಲಯದ ಪವಿತ್ರಪಾಣಿ ಮಾಧವ ಭಟ್, ರಾಮಭಟ್, ಕೆ. ನಾರಾಯಣ ಭಟ್, ಪರಮೇಶ್ವರ ಭಟ್, ಮಾಧವ ಮಯ್ಯ, ವಿಷ್ಣೂಮೂರ್ತಿ ನಟ್ಟೋಜ ಪುರೋಹಿತ ವರ್ಗದವರು ನೆರವೇರಸಿದರು.
ಕಟೀಲು ಮೇಳದ ಯಕ್ಷಗಾನದ ಸಂಧರ್ಭದಲ್ಲಿ ಕಟೀಲು ದೇವಳದ ಅನಂತ ಪದ್ಮನಾಭ ಆಸ್ರಣ್ಣ,ಹರಿನಾರಾಯಣ ಆಸ್ರಣ್ಣ, ಕಮಲಾದೇವಿ ಪ್ರಸಾದ, ವೆಂಕಟರಮಣ ಆಸ್ರಣ್ಣ , ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಶ್ರೀ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಪಡೆದರು. ಕಲಾಶಾಭಿಷೇಕದ ಸಂದರ್ಭ ಹಿಂದೂ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ ಭಟ್ ಮಾಜಿ ಸಚಿವರುಗಳಾದ ಬಿ.ನಾಗರಾಜ ಶೆಟ್ಟಿ, ಬಿ.ರಮಾನಾಥ ರೈ,ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿ ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ , ಉಧ್ಯಮಿ ಪುಣೆ ರೋಹಿತ್ ಶೆಟ್ಟಿ, ಹಲಾವಾರು ಗಣ್ಯರು ಉಪಸ್ಥಿತರಿದ್ದರು.
ದೇವಳದ ಅನುವಂಶಿಕ ಆಡಳಿತ ಮೊಕತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಅನುವಂಶಿಕ ಮೊಕ್ತೇಸರರಾದ ಯು. ತಾರಾನಾಥ ಆಳ್ವ, ಚೇರಾ ಸೂರ್ಯ ನಾರಾಯಣ ರಾವ್ ಹಾಗೂ ಉಳಿಪಾಡಿಗುತ್ತು ಅರುಣ್ ಆಳ್ವ, ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ಹಾಗೂ ,ಉಳಿಪಾಡಿಗುತ್ತು ಸುಭಾಷ್ ನಾೈಕ್ , ಅರುಣ್ ಆಳ್ವ ,ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಕೃಷ್ಣಕುಮಾರ್ ಪೂಂಜ, ತಾರಾನಾಥ ಕೊಟ್ಟಾರಿ, ಅಮ್ಮುಂಜೆಗುತ್ತು ಶಿವಪ್ರಸಾದ್ ಶೆಟ್ಟಿ , ಕಾಂತಪ್ಹಾಪ ಶೆಟ್ಟಿ ಕೊಡ್ಮಾಣ್ ಸಾವಿರ ಸೀಮೇಯ ಭಕ್ತಾಧಿಗಳು ಉಪಸ್ಥಿತರಿದ್ದರು.



