ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಪಡು ಹಾಗೂ ಊರಿನ ಸಂಘಸಂಸ್ಥೆಗಳ ಸಹಕಾರದೊಂದಿಗೆ `ತುಳುವೆರೆ ಮಿನದನ’ ಕಾರ್ಯಕ್ರಮ ಅ.19ರಂದು ನೀರುಮಾರ್ಗ ಪಡು ಬದಿನಡಿ ಸಮೀಪದ ಕೆಸರುಗದ್ದೆಯಲ್ಲಿ ನಡೆಯಿತು.
ತುಳು ಆಸಕತ ಜನತೆ ಇದರಲ್ಲಿ ಆಸಕ್ತಿಯಿಂದ ಪಾಲ್ಗೊಂಡು ವಿವಿಧ ವಿನೋದಾವಳಿಯಲ್ಲಿ ಭಾಗವಹಿಸಿದ್ದರು. ಅಕ್ಷರಶಃ ಕೆಸರಲ್ಲಿ ಮಿಂದೆದ್ದ ಜನತೆ ಒಂದು ದಿನ ತಮ್ಮ ಮನದ ಕಹಿಯನ್ನು ಮರೆತರು.
ಬೆಳಗ್ಗೆ 9ಗಂಟೆಗೆ ಕಾರ್ಯಕ್ರಮವನ್ನು ಅಗ್ರಜ ಬಿಲ್ಡರ್ಸ್ನ ಸಂದೇಶ್ ಶೆಟ್ಟಿ ರ್ಉದ್ಘಾಟಿಸಿದರು . / ದಾಯ್ಜಿವಲ್ಡರ್? ಮಿಡಿಯಾ ಲಿಮಿಟೆಡ್ ಅಧ್ಯಕ್ಷ ವಾಲ್ಟರ್ ನಂದಳಿಕೆ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ಕುಂಞಣ್ಣ ಶೆಟ್ಟಿ ಸ್ಪರ್ಧೆ ಉದ್ಘಾಟನೆ ಮಾಡಿದ್ದಾರೆ. ಕರ್ನಾಟಕ ಬ್ಯಾಂಕ್ನ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶ್ಪಾಂಡೆ, ಉತ್ತರ ವಿಧಾನ ಸಭಾ ಶಾಸಕ ಮೊಯಿದಿನ್ ಬಾವಾ, ಗುರುಪುರ ವ್ಯವಸಾಯ ಸೇವ ಸಹಕಾರಿ ಬ್ಯಾಂಕ್ ನ ಕಾರ್ಯನಿರ್ವಾಣಾಧಿಕಾರಿ ನಿರಂಜಯ, ಕದ್ರಿ ನವನೀತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನಾನಾ ಸ್ಪಧರ್?ಗಳು: ಟೊಂಕ ಓಟ, ಜಿಗಿತ ಓಟ, ಮೂಟೆ ಹೊತ್ತು ಓಟ, ನೀರಿನ ಮಡಿಕೆ ಹೊತ್ತು ಓಟ, ಎದುರುಕತೆ, ಹಗ್ಗೆಜಗ್ಗಾಟ, ದೂರ ಎಸೆತ, ನಿಧಿ ತೆಗೆಯುವುದು, ನಮ್ಮೂರ ಸರದಾರ, ಚೆಂಡಾಟ, ಮಡಲ್ ಹೆಣೆಯುವುದು, ಪಾಡ್ದನ, ಈಡಿಸುಡಿ ರಚನೆ, ತಪ್ಪಂಗಾಯಿ, ಹಾಲೆ ಎಳೆಯುವುದು, ಹಿಂದೆ ಓಟ ಸೇರಿದಂತೆ ನಾನಾ ಸ್ಪಧರ್? ನಡೆಯಲಿದೆ. ಪ್ರಾತ್ಯಕ್ಷಿಕೆಯಾಗಿ ಲಗೋರಿ, ಪಲ್ಲಿ, ಹಗ್ಗ ಎಣೆಯುವುದು, ಬುಟ್ಟಿ ಹೆಣೆಯುವುದು, ಮುಡಿಕಟ್ಟುವುದು, ವಸ್ತು ಪ್ರದರ್ಶನ, ಜುಬಿಲಿ, ಉರೋಲ್ ಮುಂತಾದ ತುಳುನಾಡಿನ ಸಂಸ್ಕೃತಿಯನ್ನು ಸ್ಮರಿಸುವ ಕಾರ್ಯಕ್ರಮಗಳು ಜರುಗಿದವು. ಇದರಲ್ಲಿ ವಿಜೇತರಾದವರು ಬಹುಮಾನವಾಗಿ ಒಂದು ಮುಡಿ, ಅರ್ಧ ಮುಡಿ ಅಕ್ಕಿ ಮನೆ ಉಪಯೋಗಿ ವಸ್ತುಗಳನ್ನು ಪಡೆದರು. ವಿಶೇಷ ಬಹುಮಾನವಾಗಿ ಅಟ್ಟದ ಅರಿ-ಕಟ್ಟದ ಕೋರಿ ನೀಡಿದ್ದು ವಿಶೇಷವಾಗಿತ್ತು.
ವಿಶೇಷ ಆಕರ್ಷಣೆಯಾಗಿ ಜಾನಪದ ಕಲಾವಿರು, ರಂಗನಿರ್ಧೇಧಶಕರಾದ ಶೀನ ನಾಡೋಳಿ ಮತ್ತು ಮೈಮ್ದಾಸ್ ತಂಡದಿಂದ ಜನಪಾದ ಹಾಡುಗಳು, ಲಹರಿ ತಂಡದ ಹರೀಶ್ ಕೊಡಿಯಾಲ್ಬೈಲ್ ನೇತೃತ್ವದಲ್ಲಿ ಮರಳು ಶಿಲ್ಪ ರಚನೆ, ಯುವಕಲಾವಿದರಿಂದ ಕಲಾ ಪ್ರಾತ್ಯಕ್ಷಿಕೆ ನಡೆಯಿತು.
ಆಹಾರೋತ್ಸವ, ಫೊಟೋ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳು ನಡೆದವು.
ವಿಜಯಕುಮಾರ್ ಸ್ವಾಗತಿಸಿ ಶರತ್ ಶೆಟ್ಟಿ ಕಾಯಱಕ್ರಮ ನಿರೂಪಿಸಿದರು.ಗೋಕುಲುದಾಸ್ ಧನ್ಯವಾದವಿತ್ತರು









































