ಕೈಕಂಬ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಜಾನುವಾರುಗಳ ಸಾಮೂಹಿಕ ಜಂತುಹುಳುಗಳ ನಿವಾರಣಾ ಕಾರ್ಯಕ್ರಮವು ನ.೨೬ರಂದು ಗುರುವಾರ ನೂಯಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ ನಡೆಯಿತು.
ಒಕ್ಕೂಟದ ಉಪವ್ಯವಸ್ಥಾಪಕರಾದ ಡಾ.ಚಂದ್ರಶೇಖರ ಭಟ್, ಒಕ್ಕೂಟದ ನಿರ್ದೇಶಕರಾದ ಸುಭದ್ರ ರಾವ್, ವಿಸ್ತರಣಾಧಿಕಾರಿ ಸರೋಜಿನಿ, ನೂಯಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ರೂಪ ಎಸ್ ಚೌಟ, ಕಾರ್ಯದರ್ಶಿ ಪದ್ಮಿನಿ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
