ಬಂಟ್ವಾಳ: ಸಮಾಜಸೇವೆಯಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ  ನೆತ್ತರಕೆರೆ ನವೋದಯ ಮಿತ್ರ ಕಲಾ ವೃಂದಕ್ಕೆ ಈಬಾರಿಯ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.   ಕಲಾವೃಂದವು ಮೂವತ್ತ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿಯೇ ಜನಪರ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿ ಬಂದಿದ್ದು, ಕಲಾವೃಂದದ ಸರ್ವಸದಸ್ಯರಿಗೆ ಸಂತಸವನ್ನು ಇಮ್ಮಡಿಗೊಳಿಸಿದೆ.IMG-20201104-WA0043

ಧಾರ್ಮಿಕ,ಶೈಕ್ಷಣಿಕ,ಕಲೆ, ಧಾರ್ಮಿಕ,ಆರೋಗ್ಯ,ಗ್ರಾಮವಿಕಾಸ ಕೈಂಕರ್ಯದಲ್ಲಿ ತೊಡಗಿರುವ  ಕಲಾ ವೃಂದ ಸೇವೆಯಲ್ಲಿ ಸಾರ್ಥಕತೆ ಸತ್ಯಕ್ಕೆ ಮಾನ್ಯತೆ ಎಂಬಧ್ಯೇಯ ವಾಕ್ಯದೊಂದಿಗೆ ಸಮಾಜದ ಸಮಗ್ರ ಶ್ರೇಯೋಭಿವೃದ್ದಿಗಾಗಿ ದುಡಿಯುತ್ತಿದೆ. ವೃಂದದ ಸಮಾಜಮುಖಿ ಚಟುವಟಿಕೆಗೆ  ನೆಹರುಯುವ ಕೇಂದ್ರ ಸಹಿತ ಹಲವು ಪ್ರಶಸ್ತಿ ನಾಟಕ ಸ್ಪರ್ಧೆಯಲ್ಲು ಬಹುಮಾನ ಗಿಟ್ಡೊಸಿಕೊಂಡಿದ್ದು, ಇದೀಗ ಕಲಾವೃಂದದ ಸೇವೆಯ ಕಿರೀಟಕ್ಕೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗರಿ ಮೂಡಿಸಿದೆ.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀ ನೊವಾಸ ಪೂಜಾರಿ ಅವರು ನವೋದಯ ಮಿತ್ರಕಲಾ ವೃಂದದ ಪದಾಧಿಕಾರಿಗಳು,ಸದಸ್ಯರ ಪರವಾಗಿ ಅಧ್ಯಕ್ಷ ಸುರೇಶ್ ಭಂಡಾರಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.ಈ ಸಂದರ್ಭದಲ್ಲಿ ಸಂಚಾಲಕ ದಾಮೋದರ ನೆತ್ತರಕೆರೆ ಕಲಾ ವೃಂದದ  ಪದಾಧಿಕಾರಿಗಳು,ಸದಸ್ಯರು ಹಾಜರಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕರಾದ ವೇದವ್ಯಾಸ ಕಾಮತ್,ಡಾ.ಭರತ್ ಶೆಟ್ಟಿ,ಮೇಯರ್ ದಿವಾಕರ್ ಪಾಂಡೇಶ್ವರ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್,ದಕಜಿಪಂ‌ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಮತ್ತಿರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *