ಬಂಟ್ವಾಳ: ತಾಲೂಕಿನ ನಾಲ್ವರು ಸಾಧಕರ ಸಹಿತ ಉತ್ತಮ ಕಾರ್ಯಚಟುವಟಿಕೆಯ ಮೂಲಕ ಸಾಧನೆಗೈದಿರುವ ಸಂಘಕ್ಕೆ 2020-21 ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.ನೇತ್ರಾವತಿ ವೀರ, ಈಜುಗಾರ,ವಾಲಿಬಾಲ್ ಆಟಗಾರ,ಕಲಾವಿದ,ಸಮಾಜ ಸೇವೆಯಲ್ಲಿ ಮಾದರಿಯಾಗಿರುವ ರಿಕ್ಷಾಚಾಲಕ ಅಬ್ದುಲ್ ಸತ್ತಾರ್ ಗೂಡಿನಬಳಿ, ರಂಗನಟ,ತುಳುಚಲನಚಿತ್ರ ನಟ ಚೇತನ್ ರೈ ಮಾಣಿ,ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿರುವ ಸೇಸಪ್ಪ ಟೈಲರ್ ಪಜೀರ್, ಧಾರ್ಮಿಕ,ಶೈಕ್ಷಣಿಕ,ಸಾಮಾಜಿಕ ಕಾರ್ಯಕರ್ತ,ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ಥ ಹೋರಾಟ ಸಮಿತಿ ಅಧ್ಯಕ್ಷರು,ಹೋರಾಟಗಾರರು ಸಜೀಪ ಮಾಗಣೆಯ ತಂತ್ರಿಗಳಾದ ಎಂ.ಸುಬ್ರಹ್ಮಣ್ಯ ಭಟ್ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಯ ಮೂಲಕ ಗುರುತಿಸಿರುವ ನೆತ್ತರಕೆರೆ ನವೋದಯ ಮಿತ್ರಕಲಾವೃಂದಕ್ಕೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ. 
