ಬಂಟ್ವಾಳ: ತಾಲೂಕಿನ ದೈವಸ್ಥಳ ಮೂಲ್ಕಾಜೆ ಮಾಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಹಾಗೂ ಸಿಬ್ಬಂದಿಗಳ ಕೊರತೆ ಮತ್ತಿತರ ಅವ್ಯವಸ್ಥೆಗಳನ್ನು ಸರಿದೂಗಿಸುವಂತೆ ಒತ್ತಾಯಿಸಿದೇವಶ್ಯ ಮೂಡೂರು, ಮಣಿನಾಲ್ಕರೂ ಗ್ರಾಮಸ್ಥರ ನಿಯೋಗ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ರಾಜೇಶ್ ನಾಯ್ಕ ಉಳಿಪಾಡಿ ಗುತ್ತು ಇವರಿಗೆ ಮನವಿ ಮಾಡಲಾಯಿತು.
ಈಚೆಗೆ ಶ್ರೀ ಕ್ಷೇತ್ರ ಕಾರಿಂಜಕ್ಕೆ ಭೇಟಿನೀಡಿದ ಜಿಲ್ಲಾ ಉಸ್ತುವಾರ ಸಚಿವರನ್ನು ಸರಪಾಡಿ ಗ್ರಾಪಂ ನ ಮಾಜಿ ಅಧ್ಯಕ್ಷ ಧನಂಜಯ ಶೆಟ್ಟಿಯವರ ನೇತೃತ್ವದ ನಿಯೋಗ ಭೇಟಿಯಾಗಿ ಈ ಮನವಿ ಸಲ್ಲಿಸಿದೆ.ಈ ಸಂದರ್ಭ ರಾಮಕೃಷ್ಣ ಮಯ್ಯ,ಚಂದ್ರ,ಜಿನೇಂದ್ರಜೈನ್ ಮೊದಲಾದವರಿದ್ದರು.
