ಕುಂದಾಪುರ : ಕೋವಿಡ್ ಸೋಂಕು ತಡೆಗಟ್ಟಲು ಸಕಾ೯ರ ದೊಂದಿಗೆ ಎಲ್ಲಾ ಸಾವ೯ಜನಿಕರು ಸಹಕರಿಸಬೇಕು ಸಕಾ೯ರ ತನ್ನ ಎಲ್ಲಾ ಶ್ರಮವನ್ನು ಹಾಕುತ್ತಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಆ.23ರಂದು ತೆಕಟ್ಟೆಯಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
IMG-20200823-WA0058
ಈಗಾಗಲೇ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ಕೋರೊನಾ ಟೆಸ್ಟ್ ಕಿಟ್ ಗಳನ್ನು ನೀಡಲಾಗಿದೆ.ಸಾವ೯ಜನಿಕರು ಹೆದರದೆ ಜೀವನ ಸಾಗಿಸಬೇಕು ಎಂದರು.ಮುಖ್ಯ ಅತಿಥಿಗಳಾಗಿ ಭೂ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೋಭಾ ಎಚ್, ಡಾ. ಕುಸುಮಾಕರ ಶೆಟ್ಟಿ, ಉದ್ಯಮಿ ಕೃಷ್ಣಮೂತಿ೯ ಕೊಠಾರಿ, ಫಾಮಾ೯ಸಿಸ್ಟ್ ಉಮೇಶ್ ಬಿತಿ೯ ಮುಂತಾದವರು ಭಾಗವಹಿಸಿದ್ದರು.ಕೇಂದ್ರದ ಮುಖ್ಯಸ್ಥ ಸುಂದರ ಪೂಜಾರಿ ಮೂಡುಕುಕ್ಕುಡೆ ಪ್ರಸ್ತಾವನೆಗೈದು ಸ್ವಾಗತಿಸಿದರು.ಈ ಸಂದಭ೯ದಲ್ಲಿ ಕರೋನಾ ವಾರಿಯರ್ಸ್ ರವರನ್ನು ಗೌರವಿಸಲಾಯಿತು. ಉಮೇಶ್ ಬಿತಿ೯ ವಂದಿಸಿದರು.ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.ಸಾವ೯ಜನಿಕರಿಗೆ ಉಚಿತವಾಗಿ ಮಾಸ್ಕ್ ಸ್ಯಾನಿಟೈಸರ್ ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *