ಬಂಟ್ವಾಳ: ಅರ್ಚಕರ ಮತ್ತು ಪುರೋಹಿತರ ಪರಿಷತ್ತ್ ನ ಬಂಟ್ವಾಳ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ವೇದಮೂರ್ತಿ ಶಿವರಾಮಯ್ಯ ಆಯ್ಕೆಉಅಗಿದ್ದಾರೆ. ಈಚೆಗೆ ಬಂಟ್ವಾಳ ತಾಲೂಕು ಬ್ರಾಹ್ಮಣ ಪರಿಷತ್ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಳಿದಂತೆ ಪಾಧಿಕಾರಿಗಳಾಗಿ ಈಶ್ವರ ಭಟ್ ( ಉಪಾಧ್ಯಕ್ಷ), ಶ್ರೀನಿಧಿ ಮುಚ್ಚಿನ್ನಾಯ ( ಕಾರ್ಯದರ್ಶಿ), ಗಣೇಶ್ ಭಟ್ ಸುಜೀರು (ಜೊತೆ ಕಾರ್ಯದರ್ಶಿ), ಎರುಂಬು ಬಾಲಕೃಷ್ಣ ಕಾರಂತ(ಸಂಘಟನಾ ಕಾರ್ಯದರ್ಶಿ), ಕೆ ವಾಸುದೇವ ಭಟ್ (ಖಜಾಂಚಿ),ವೆಂಕಟ್ರಮಣ ಭಟ್ ಪೈಕ( ಸಂಚಾಲಕರು) ರಾಜಗೋಪಾಲಾಚಾರ್ಯ( ಸಂಯೋಜಕರು), ನಿರ್ದೇಶಕರಾಗಿ ಎಂ.ಸುಬ್ರಹ್ಮಣ್ಯ ಭಟ್, ಸುದರ್ಶನ ಬಲ್ಲಾಳ್ ,ನವರಾಜ ಭಟ್ ,ಅಮೈ ಪ್ರಶಾಂತ್ ಭಟ್, ಸುಬ್ರಾಯ ಗೋಖಲೆ, ವಲಯ ಸಂಚಾಲಕರಾಗಿ ವೇದವ್ಯಾಸ ಪಾಂಗನ್ನಾಯ, ನೀಲಕಂಠ ಪರಾಡ್ಕರ್, ಹರಿಪ್ರಸಾದ್ ಉಂಡಮನೆ ಕೃಷ್ಣಭಟ್, ನಾಗರಾಜ ಭಟ್, ರಾಘವೇಂದ್ರರಾವ್, ಲಕ್ಷ್ಮೀಶ ಮಯ್ಯ, ಅನಂತರಾಮ ಐತಾಳ, ರಾಘವೇಂದ್ರ ಭಟ್ ಮುರಳೀಧರ ಭಟ್ ಆಯ್ಕೆಯಾದರು.
ಜಿಲ್ಲಾ ಘಟಕದ ಅಧ್ಯಕ್ಷರಾದ ವೇದಮೂರ್ತಿ ಕೃಷ್ಣರಾಜ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಬ್ರಾಹ್ಮಣ ಪರಿಷತ್ ಅಧ್ಯಕ್ಷ ನ್ಯಾಯವಾದಿ ರಮೇಶ್ ಉಪಾಧ್ಯಾಯ ಕೊಡಿಮಜಲು, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಶ್ರೀಹರಿ ಉಪಾಧ್ಯಾಯ, ಅನಂತ ಪದ್ಮನಾಭ ಆಚಾರ್ಯ, ಪ್ರಶಾಂತ್ ಗೋರೆ, ಶಂಕರನಾರಾಯಣ ಶರ್ಮ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೆ ಸೂರ್ಯನಾರಾಯಣ ಭಟ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ ತಂತ್ರಿ, ತಾಲೂಕು ಬ್ರಾಹ್ಮಣ ಪರಿಷತ್ತು ಕಾರ್ಯದರ್ಶಿ ರಾಘವ ಕಾರoತ, ವೇದಮೂರ್ತಿ ಪಿ ವೆಂಕಪ್ಪಯ್ಯ ಭಟ್, ವೇದಮೂರ್ತಿ ಶಿವಾನಂದ ಮಯ್ಯ ಉಪಸ್ಥಿತರಿದ್ದರು.
ಕೆ ಕೃಷ್ಣರಾಜ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತ ಪದ್ಮನಾಭ ಆಚಾರ್ಯ ನಿರೂಪಿಸಿದರು. ರಾಘವೇಂದ್ರ ಹೊಳ್ಳ ವಂದಿಸಿದರು.
