ಬಂಟ್ವಾಳ: ಮಹಾಮಾರಿ ಕೊರೋನ ವಿರುದ್ದ ಸಮರ ಸಾರಿರುವ ಪ್ರಧಾನಿ ನರೇಂದ್ರಮೋದಿಯವರ  ಭಾನುವಾರ ರಾತ್ರಿ 9 ಗಂಟೆಯಿಂದ 9 ನಿಮಿಷದವರೆಗೆ ದೀಪ ಬೆಳಗುವ ಕರೆಗೆ ಬಂಟ್ವಾಳದಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು.IMG-20200405-WA0252

ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ದಂಪತಿ ಗಂಜಿಮಠದಲ್ಲಿರುವ ಒಡ್ಡೂರು ಫಾಮ್೯ನಲ್ಲಿರುವ ನಿವಾಸದಲ್ಲಿ ದೀಪ ಬೆಳಗಿಸಿ ಕೊರೋನ ಮುಕ್ತಿಗಾಗಿ ಮತ್ತು ಜನರ ಒಳಿತಿಗಾಗಿ ಪ್ರಾರ್ಥಿಸಿದರು.IMG-20200405-WA0287

ಬೆಳಗ್ಗಿನಿಂದಲೇ ಮನೆಮಂದಿ ಹಣತೆ,ದೀಪಗಳನ್ನು ಸಿದ್ದಪಡಿಸಿ ರಾತ್ರಿ 9 ಗಂಟೆಯ ಹೊತ್ತಿಗೆ ಮನೆಮುಂದೆ,ಟೆರೇಸ್ ಗಳಲ್ಲಿ ಜಾತಿ,ಮತ,ಬೇಧ ಮರೆತು ದೀಪ ಬೆಳಗಿ ಮೋದಿಯವರ ಕರೆಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರಲ್ಲದೆ ಮೋದಿ,ಭಾರತಮಾತೆಗೆ ಜೈಕಾರ ಹಾಕಿದರು. ಪೊಳಲಿ ಕ್ಷೇತ್ರದ ಸಹಿತ ವಿವಿಧ ದೇವಾಲಯಗಳಲ್ಲು ಅರ್ಚಕರು ದೀಪ ಬೆಳಗಿಸಿ ಬೆಂಬಲ ವ್ಯಕ್ತಪಡಿಸಿದರು.

By suddi9

Leave a Reply

Your email address will not be published. Required fields are marked *