ಬಂಟ್ವಾಳ: ಕೊರೋನಾ ಮಹಾಮಾರಿ ವಿರುದ್ಧ ಜನಜಾಗೃತಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾ.22 ರ ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯ ವರೆಗೆ ಘೋಷಿಸಿರುವ ಜನತಾ ಕರ್ಪ್ಯೂಗೆ  ಜನರು ಮನೆಯಲ್ಲಿಯೇ ಇದ್ದು ಸಹಕರಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಮನವಿ ಮಾಡಿದ್ದಾರೆ.

FB_IMG_1583752959550ಕೊರೋನಾ ವೈರಸ್  ವ್ಯಾಪಕವಾಗಿ ಹರಡುವಿಕೆಯನ್ನು ತಡೆಗಟ್ಟುವುದು ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ಜನ ಜಾಗೃತಿ ಉಂಟು ಮಾಡುವ ದೃಷಿಯಿಂದ ಪ್ರಧಾನಿಯವರು  ಜನತಾ ಕರ್ಪ್ಯೂಗೆ ಮನವಿ ಮಾಡಿಕೊಂಡಿದ್ದು,  ಪ್ರಧಾನಮಂತ್ರಿಯವರ ಈ ಮನವಿಗೆ ಸಾರ್ವಜನಿಕರು ಸಂಪೂರ್ಣ ಸಹಕಾರವನ್ನು ನೀಡಬೇಕೆಂದು ಶಾಸಕರು ಪ್ರಕಟಣೆಯಲ್ಲಿ  ಮನವಿ ಮಾಡಿದ್ದಾರೆದ್ದಾರೆ.

By suddi9

Leave a Reply

Your email address will not be published. Required fields are marked *