ಕೊಂಪದವು-ತ್ರಿನೇತ್ರ ಫ್ರೆಂಡ್ಸ್ ಕ್ಲಬ್ ಅರ್ಜುನಕೋಡಿ, ಮಾತೃಭೂಮಿ ಸೌಹಾರ್ದ ಸಹಕಾರಿ ಗುರುಪುರ ಕೈಕಂಬ ಗ್ರಾಮ ಪಂಚಾಯತ್ ಮುಚ್ಚೂರು ಹಾಗೂ ಕೆ.ಎಂ.ಸಿ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ ಮುಚ್ಚೂರು ಉದ್ಘಾಟಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೀರಪ್ಪ ಗೌಡ್, ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಅಧ್ಯಾಪಕರಾದ ವಾಸು ಕೆ. ಉಪಸ್ಥಿತರಿದ್ದರು.ತ್ರಿನೇತ್ರ ಫ್ರೆಂಡ್ಸ್ ಕ್ಲಬ್ನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಪ್ರಸಾದ್ ಶೆಟ್ಟಿ ಸರ್ವರನ್ನು ಸ್ವಾಗತಿಸಿ ವಂದಿಸಿದರು.
