ಸಿ.ವಿ.ರಾಮನ್ರವರು ನಮ್ಮದೇಶಕಂಡಅತ್ಯುತ್ತಮ ವಿಜ್ಞಾನಿ, ಭಾರತೀಯ ವಿಜ್ಞಾನಕ್ಕೆಅವರಕೊಡುಗೆ ಶ್ಲಾಘನೀಯ, ವಿಜ್ಞಾನದಲ್ಲಿನೊಬೆಲ್ ಪಾರಿತೋಷಕ ಪಡೆದಮೊದಲ ಭಾರತೀಯ ವಿಜ್ಞಾನಿ ಸಿ.ವಿ.ರಾಮನ್. ಬಡತನದಲ್ಲೇ ಬೆಳೆದವರು, ಪ್ರತಿಯೊಂದು ವಿಷಯವನ್ನು ಬಹಳ ಆಸಕ್ತಿಯಿಂದ, ಕುತೂಹಲದಿಂದ ಗಮನಿಸುತ್ತಿದ್ದರು ಹಾಗೂ ಪ್ರಬಲ ಆತ್ಮವಿಶ್ವಾಸವನ್ನು ಹೊಂದಿದ್ದರು.ಇದುಅವರ ಸಾಧನೆಗೆಕಾರಣವಾಯಿತು.
ನಾವು ಪ್ರತಿ ನಿತ್ಯ ಪ್ರತಿಯೊಂದು ವಿಷಯದಲ್ಲೂ ವಿಜ್ಞಾನವನ್ನು ಹುಡುಕಿ, ಭಾರತೀಯ ವಿಜ್ಞಾನಇನ್ನಷ್ಟುಎತ್ತರಕ್ಕೆ ಬೆಳೆಯಲು ಕಾರಣರಾಗೋಣಎಂದು ಶ್ರೀರಾಮ ಪದವಿ ವಿಭಾಗದಭೌತಶಾಸ್ತ್ರಉಪನ್ಯಾಸಕರಾದಅಭಿಷೇಕ್ಇವರು ಶ್ರೀರಾಮ ಪ್ರೌಢಶಾಲೆ ಮಧುಕರ ಸಭಾಂಗಣದಲ್ಲಿ ನಡೆದರಾಷ್ಟ್ರೀಯ ವಿಜ್ಞಾನ ದಿನಾಚರಣೆಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃತಕಜ್ವಾಲಾಮುಖಿಯ ಪ್ರಾತ್ಯಕ್ಷಿಕೆಯನ್ನು ಮಾಡಿತೋರಿಸುವಮೂಲಕ ಕಾರ್ಯಕ್ರಮವನ್ನುಉದ್ಘಾಟಿಸಲಾಯಿತು.ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ವಸಂತಿಕುಮಾರಿ ಉಪಸ್ಥಿತರಿದ್ದರು.ಅಟಲ್ಟಿಂಕರಿಂಗ್ ಪ್ರಯೋಗಾಲಯದಲ್ಲಿವಿವಿಧರೀತಿಯವಿಜ್ಞಾನ ವಸ್ತುಪ್ರದರ್ಶನವನ್ನುಏರ್ಪಡಿಸಲಾಗಿತ್ತು.ಎಲ್ಲಾವಿದ್ಯಾರ್ಥಿಗಳು ಪ್ರದರ್ಶನವನ್ನು ವೀಕ್ಷಿಸಿದರು.ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಭೂಮಿಕಾ ನಿರೂಪಿಸಿ, ತ್ರಿಶಾ ಸ್ವಾಗತಿಸಿ, ಹೇಮಶ್ರೀ ವಂದಿಸಿದರು.

