ಬಂಟ್ವಾಳ : ದ.ಕ. ಜಿಪಂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬಂಟ್ವಾಳ ಆರ್ಐಡಿಎಫ್ 20ರಡಿ ನಿರ್ಮಿಸಲಾದ ವಾಮದಪದವು ಪಶುಚಿಕಿತ್ಸಾಲಯ ಇದರ ನೂತನ ಕಟ್ಟಡವನ್ನು ಶಾಸಕ ರಾಜೇಶ್ ನಾಯ್ಕ್ ಮಂಗಳವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ತುಂಗಪ್ಪ ಬಂಗೇರ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಅಬ್ಬಾಸ್ ಅಲಿ, ಸದಸ್ಯರಾದ ಧನಲಕ್ಷ್ಮೀ ಸಿ. ಬಂಗೇರ, ರತ್ನಾವತಿ ಜಯರಾಮ ಶೆಟ್ಟಿ, ಚೆನ್ನೈತ್ತೋಡಿ ಗ್ರಾಪಂ ಅಧ್ಯಕ್ಷ ಯತೀಶ್ ಶೆಟ್ಟಿ, ದ.ಕ. ಹಾಲು ಒಕ್ಕೂಟ ನಿ.ಮಂಗಳೂರು ಇದರ ವ್ಯವಸ್ಥಾ ನಿರ್ದೇಶಕ ಡಾ.ಜಿ.ವಿ. ಹೆಗ್ಡೆ, ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ವಾಮದಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಚೌಟ, ವಗ್ಗ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶಿವಪ್ಪ ಗೌಡ ಎನ್., ಪಶುಸಂಗೋಪನಾ .
ಪಶುವೈದ್ಯಕೀಯ ಸೇವಾ ಇಲಾಖೆ ದ.ಕ. ಮಂಗಳೂರು ಉಪನಿರ್ದೇಶಕ ಡಾ. ಎಸ್.ಜಯರಾಜ್, ಪ್ರಮೋದ್ ಕುಮಾರ್ ರೈ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ದ.ಕ. ಬಂಟ್ವಾಳ ಸಹಾಯ ನಿರ್ದೇಶಕ ಡಾ. ಎಚ್.ಆರ್. ಲಸ್ರಾದೋ, ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್, ಪಶುವೈದ್ಯಾಧಿಕಾರಿಯಾದ ಸುರೇಶ್ ಭಟ್, ಅಶೋಕ್, ನಿಖಿಲ್ ರಾಜ್, ಹರೀಶ್, ಪುರುಷೋತ್ತಮ ರಾಜ್, ಉಮೇಶ್ ಕಿರಣ್, ಗ್ರಾಮ ಪಂಚಾಯತ್ ಸದಸ್ಯರಾದ ಆನಂದ ಪೂಜಾರಿ, ಅನಂತ ಪೈ ಹಾಜರಿದ್ದರು.


