ಮಂಗಳೂರು: ಪತ್ರಿಕಾಗೋಷ್ಠಿ “ಕರ್ನಾಟಕ ರಾಷ್ಟ್ರ ಸಮಿತಿ” ಪಕ್ಷವು ಮಂಗಳೂರು ಮಹಾ ನಗರ ಪಾಲಿಕಾ ವಾರ್ಡುಗಳಲ್ಲಿ ಸ್ಪರ್ಧಿಸುತ್ತಿದ್ದು ಆ ಪ್ರ ಯುಕ್ತ ಅ.30ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಕದ್ರಿ ಕಂಬಳದ ದ ಬಳಿ ಇರುವ ಲೇನ್ ರೋಡ್ ಗ್ರೈನ್ ಸುಪರ್ ಮಾರ್ಕೆಟ್ ಎದುರು ಮೌರ್ಯಸ್ ಪ್ಯಾಲೇಸ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಲಿದ್ದಾರೆ.
ಕೆ ಅರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಮಿತ್ರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ, ದ. ಕ. ಜಿಲ್ಲಾಧ್ಯಕ್ಷ ಡಿ. ಅಲೆಕ್ಸಾಂಡರ್ ಡಿಸೋಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಜಿಲಕೇರಿ ಉಪಸ್ಥಿತರಿರುವರು. ಮಾಹಿತಿಗಾಗಿ 98452420, 9448240579 ಸಂಪರ್ಕಿಸಬಹುದು.
