ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ತೆಲಾಂಗಣದ ನಾರಾಯಣ್ ಪೇಟೆ ಶಾಸಕ ಎಸ್ ಆರ್ ರೆಡ್ಡಿ ಅವರು ಕುಟುಂಬ ಸಮೇತರಾಗಿ ಪೊಳಲಿ ದೇವಳಕ್ಕೆ ಬಂದು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಳದ ಅರ್ಚಕ ಪರಮೇಶ್ವರ ಭಟ್ ಪ್ರಸಾದ ನೀಡಿದರು.
ರಾಯಚೂರು ನವೋದಯ ಮೆಡಿಕಲ್ ಕಾಲೇಜು ಚೇರ್ಮೆನ್ ಶಾಸಕ ಎಸ್ ಆರ್ ರೆಡ್ಡಿ ಅವರೊಂದಿಗೆ ಅವರ ಧರ್ಮಪತ್ನಿ ಸ್ವಾತಿ ರೆಡ್ಡಿ , ಮಗ ಅಮೃತ್ ರೆಡ್ಡಿ ,ಮಗಳು ನಂದಿಕಾ ರೆಡ್ಡಿ ಹಾಗೂ ಮೋಹನ್ ರೆಡ್ಡಿ, ಜಯರಾಜ್, ಬಸವರಾಜ್ ಇದ್ದರು.

