ಬಂಟ್ವಾಳ: ಕಲ್ಲಡ್ಕ ಶ್ರೀ ಶಾರದ ಸೇವಾ ಪ್ರತೀಷ್ಠಾನದ ವತಿಯಿಂದ ಸುಬ್ರಹ್ಮಣ್ಯನ ಬ್ರಹ್ಮರಥವನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕಲ್ಲಡ್ಕ ಕೆಳಗಿನಪೇಟೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸ ಲಾಯಿತು. ಅಲ್ಲಿಂದ
ಶ್ರೀ ರಾಮ ಮಂದಿರದವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದ ರಥಕ್ಕೆ ಅಲ್ಲಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.
ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಆಡಳಿತ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿಯವರು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಮತ್ತು ಪ್ರತಿಷ್ಠಾನದ ವಜ್ರನಾಥ ಕಲ್ಲಡ್ಕ ಇವರಿಗೆ ಶಾಲು ಹೊದೆಸಿ ಪ್ರಸಾದ ನೀಡಿ ಗೌರವಿಸಿದರು
ಈ ಸಂದರ್ಭ ಶ್ರೀ ರಾಮ ವಿದ್ಯಾ ಕೇಂದ್ರದ ಅಧ್ಯಕ್ಷ ನಾರಾಯಣ ಸೋಮಾಯಾಜಿ, ಸಂಚಾಲಕ ವಸಂತ ಮಾಧವ, ರವಿರಾಜ್, ಕಮಲ ಪ್ರಭಾಕರ ಭಟ್, ದಿನೇಶ್ ಅಮ್ಟೂರು, ಪ್ರತಿಷ್ಠಾನದ ನರಸಿಂಹ ಮಡಿವಾಳ, ಚೀ. ರಮೇಶ್, ಯತೀನ್ ಕುಮಾರ್ ಏಳ್ತೀಮಾರು, ಚಿದಾನಂದ ಆಚಾರ್ಯ, ಸತೀಶ್ ಆಚಾರ್ಯ, ನಾಗರಾಜ ಬಲ್ಯಾಯ, ಶೇಖರ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

