ಸುದ್ದಿ9 ಸುರತ್ಕಲ್: ಕರ್ನಾಟಕ ರಾಜ್ಯ ಮುಖ್ಯಮಂ ಸಿದ್ದರಾಮಯ್ಯ ಅವರು ಸೆ.26ರಂದು ಶುಕ್ರವಾರ ಬಜಪೆ ವಿಮಾನ ನಿಲ್ದಾಣದಿಂದ ನೇರವಾಗಿ ಉತ್ತರ ವಿಧಾನಸಭಾ ಶಾಸಕ ಮೊದೀನ್ ಬಾವಾ ಅವರ ಮನೆಗೆ ತೆರಳಿ ಉಪಹಾರ ಸ್ವೀಕರಿಸಿದದರು. ಅವರು ಕಾರ್ಯ ನಿಮಿತ್ತ ಉಡುಪಿಗೆ ಹೋಗುವಾ ಮಾರ್ಗದಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾಗತ ಕೋರಲಾಯಿತು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಆ ನಂತರ ಚೊಕ್ಕಬೆಟ್ಟುವಿನಲ್ಲಿರುವ ಶಾಸಕ ಮೊದೀನ್ ಬಾವಾ ಅವರ ಮನೆಯಲ್ಲಿ ಉಪಹಾರ ಸ್ವೀಕರಿಸಿದರು ಸಚಿವರಾದ ಕೆ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ,ಮೊದಲಾದವರು ಉಪಸ್ಥಿತರಿದ್ದರು.
