ಮಂಗಳೂರು:ನಗರದಲ್ಲಿ ನಡೆಯಲಿರುವ ಎಲ್ಲಾ ತರಹದ ಕಾರ್ಯಕ್ರಮಗಳ ಇವೆಂಟ್ ಮೆನೇಜ್ಮೆಂಟ್ ಸೌಲಭ್ಯ ಮತ್ತು ಬರ್ತಡೇ ಮತ್ತಿತರ ಕಾರ್ಯಕ್ರಮ ಪರಿಕರಗಳ ಮಳಿಗೆ ಕಲರ್ಸ ಇವೆಂಟ್ ಮೆನೇಜ್ಮೆಂಟ್ ಸಂಸ್ಥೆಯನ್ನು ಕದ್ರಿ ದೇವಸ್ಥಾನ ರಸ್ತೆಯ ಮಯೂರ ಪಾರ್ಕ್ ಕಾಂಪ್ಲೆಕ್ಸ್ ನಲ್ಲಿ ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತ ಎಸ್. ಸುಧಾಕರ ಜೋಗಿ ಉದ್ಘಾಟಿಸಿ ಶುಭ ಹಾರೈಸಿದರು.
ಮರೋಳಿ ಶ್ರೀ ದುರ್ಗಾ ಪದ್ಮಾ ಆಟೋ ವರ್ಕ್ಸ್ ಮಾಲಕ ಪುರುಷೋತ್ತಮ ಕೆ. ದಂಪತಿಗಳು, ಪಾಲುದಾರರಾದ ಶ್ರೀಮತಿ ಅಶ್ವಿನಿ ಮಜೇಶ್ ದಂಪತಿ, ಕಣ್ಮಣಿ ನಾಡಾರ್ ದಂಪತಿ ಮತ್ತು ಹರಿಶ್ಚಂದ್ರ ಹಾಗೂ ರಾಮಚಂದ್ರ ಕೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
