ಬಂಟ್ವಾಳ : ಹಳೆಯದಷ್ಟೇ ಅಲ್ಲ, ಹೊಚ್ಚ ಹೊಸ ನೋಟುಗಳ ಸೀರಿಯಲ್ ನಂಬರ್ ಸಹಿತ ವೈವಿಧ್ಯಮಯ ವಿಚಾರಗಳನ್ನು ಸಂಗ್ರಹಿಡುವ ಹವ್ಯಾಸ ಹೊಂದಿರುವ ಕಲ್ಲಡ್ಕದ ಕಲ್ಲಡ್ಕ ಮ್ಯೂಸಿಯಂನ ಮೊಹಮ್ಮದ್ ಯಾಸೀರ್ ಅವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೂರದರ್ಶನದ ನಿರ್ದೇಶಕ ಮಹೇಶ್ ಜೋಶಿ, ಜಸ್ಟೀಸ್ ಎಚ್.ಎನ್.ನಾಗಮೋಹನದಾಸ್, ಎಸ್.ಎ.ಚಿನ್ನೇಗೌಡ, ಎಚ್.ಎಲ್.ಎನ್.ರಾವ್, ಆರ್ಯಭಟ ಸಂಸ್ಥೆಯ ಭವಾನಿ ಶಂಕರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

