ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ವಿಶಾಲ ತಾತ್ಕಾಲಿಕ ಅಡುಗೆ ಛತ್ರಕ್ಕೆ ಅಳವಡಿಸಲಾಗಿದ್ದ ಇಂಟರ್ಲಾಕ್, ಕಲ್ಲು-ಮಣ್ಣು ಹಾಗೂ ಇತರ ಸೊತ್ತನ್ನು ಬಂಟ್ವಾಳ ನರಿಕೊಂಬಿನ ವಿವೇಕ ಜಾಗೃತ ಬಳಗದ ಕಾರ್ಯಕರ್ತರು ತೆರವುಗೊಳಿಸಲಾರಂಭಿಸಿದರು.
ಭಾನುವಾರ ಬೆಳಿಗ್ಗೆ ಕೆಲಸ ಆರಂಭಿಸಿರುವ ಡಿವೈನ್ ಪಾರ್ಕ ಸಾಲಿಗ್ರಾಮ ಇದರ ಅಂಗಸಂಸ್ಥೆಯಾದ ವಿವೇಕ ಜಾಗ್ರತ ಬಳಗ ಬಂಟ್ವಾಳ, ನರಿಕೊಂಬು ಇದರ ಸುಮಾರು 58 ಸದಸ್ಯರತಂಡದೊಂದಿಗೆ ಶ್ರೀ ರಾಮ ಸ್ತೋತ್ರ ಪಠಿಸುತ್ತ ಶ್ರಮದಾನ ನಡೆಸಿದ್ದು, ಸಂಜೆಯವರೆಗೆ ಕೆಲಸ ಮುಂದುವರಿಯಲಿದೆ.


