ಪೊಳಲಿ:ಅರ್ಕುಳ ತುಪ್ಪೆಕಲ್ಲು ಅರ್ಕುಳ ಮನೆ ಬೀಡಿನಿಂದ ಉಳ್ಳಾಕ್ಲು ಮಗ್ರಂತಾಯಿ ದೈವಗಳ ಭಂಡಾರ ಪೊಳಲಿಗೆ ಭವ್ಯ ಮೆರವಣಿಗೆಯೊಂದಿಗೆ ಆಗಮಿಸಿತು.
ಭಂಡಾರವನ್ನು ಪೊಳಲಿಯಲ್ಲಿ ಸೂಕ್ತ ವಿದಿವಿಧಾನಗಳ ಮೂಲಕ ಸ್ವಾಗತಿಸಲಾಯಿತು. ಮೆರವಣಿಗೆಯೊಂದಿಗೆ ಬಸವನೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ವಜ್ರನಾಭ ಶೆಟ್ಟಿ ಅರ್ಕುಳ ಬೀಡು ನೇತೃತ್ವದಲ್ಲಿ ಮೆರವಣಿಗೆ ಆಗಮಿಸಿತ್ತು. ಇದರೊಂದಿ ಅರ್ಕುಳ ಗ್ರಾಮದ ಭಗವದ್ಭಕ್ತರಿಂದ ಹೊರೆಕಾಣಿಕೆಯೂ ಆಗಮಿಸಿತು.
















