ಪೊಳಲಿ:ಸಹಸ್ರಾರು ವರ್ಷಗಳ ಇತಿಹಾಸವಿರುವ ಶ್ರೀ ದುರ್ಗಾಪರಮೇಶ್ವರೀ ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಂಡಿದ್ದು, ಮಾ.13 ರಂದು ಬುಧವಾರ ಬ್ರಹ್ಮಕಲಶೋತ್ಸವವು ಜರುಗಲಿದ್ದು, ದೇವಸ್ಥಾನದ ಹೆಚ್ಚಿನ ಕೆಲಸಗಳಿಗೆ ಕರಸೇವಕರು ಶ್ರಮದಾನದ ಮೂಲಕ ಸೇವೆ ಸಲ್ಲಿಸಿದ್ದು, ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ, ದೇವಸ್ಥಾನದ ಸುತ್ತ ಮುತ್ತಲಿನ ಸ್ವಚ್ಛತಾ ಕಾರ್ಯವು ನಡೆಯುತ್ತಿದ್ದು, ಇಂದಿನ ದಿನದ ಸ್ವಚ್ಛತಾ ಕಾರ್ಯಕ್ಕೆ ಪೊಳಲಿ ಆಸುಪಾಸಿನ ಹಾಗೂ ಪರವೂರಿನ ಭಕ್ತಾದಿಗಳು ಸ್ವಯಂಪ್ರೇರಣೆಯಿಂದ ಶ್ರಮದಾನದ ಮೂಲಕ ಶ್ರೀ ದೇವಿಗೆ ಅಳಿಲ ಸೇವೆ ಎಂಬಂತೆ ಹುಮ್ಮಸಿನಿಂದ ಕಾರ್ಯನಿರ್ವಹಿಸಿ, ಶ್ರೀ ದೇವಾಲಯದ ವತಿಯಿಂದ ಶ್ರಮಿಸಿದ ಭಕ್ತಾದಿಗಳಿಗೆ ಗಂಜಿ ಊಟದ ವ್ಯವಸ್ಥೆಯಿದ್ದು, ಶ್ರೀ ದೇವಿಯ ಪ್ರಸಾದ ಎಂದು ಗಂಡಸರು, ಹೆಂಗಸರು ತೃಪ್ತಿಯಿಂದ ಪುಣೀತರಾಗಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.


