ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 4ರಿಂದ 13ರವರೆಗೆ ಜರುಗಲಿರುವ ಪುನರ್ಪ್ರತಿಷ್ಠೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಪಾಕಶಾಲೆಯ ಒಲೆ ಮುಹೂರ್ತ ಸೋಮವಾರ ಪೂರ್ವಾಹ್ನ 9 ಗಂಟೆಗೆ ಜರುಗಿತು.
ಪವಿತ್ರಪಾಣಿ ಅರ್ಚಕ ಮಾಧವ ಭಟ್ ನಾರಾಯಣ ಭಟ್, ಅನಂತಪದ್ಮನಾಭಭಟ್, ನಾರಾಯಣ ಮಯ್ಯ, ಪರ್ದಕಂಡ ಮಾಧವ ಭಟ್, ಆಡಳಿತ ಮೊಕ್ತೇಸರಾದ ಡಾ/ಮಂಜಯ್ಯ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸ್ವಾಮಿ ವಿವೇಕಚೈತನ್ಯನಂದ ಸ್ವಾಮೀಜಿ,
ಅಡುಗೆ ತಯಾರಕರಾದ ಚಂದ್ರಶೇಖರ್ ಭಟ್, ಪ್ರಮೋದಭಟ್, ಮೊಹನ್ ಭಟ್, ಕೃಷ್ಣಾನಂದ ಭಟ್, ಧನಂಜಯ ಹೊಳ್ಳ, ವೆಂಕಟೇಶನಾವಡ, ಸುಬ್ರಾಯ ಕಾರಂತ, ಮಂಜುನಾಥ ಭಂಡಾರಿ, ಹರೀಶ್ ಶೆಟ್ಟಿ ಏತಮೊಗರುಗುತ್ತು, ಸದಾನಂದ ರೈ ಪೊಳಲಿ, ಪದ್ಮನಾಭ ಶೆಟ್ಟಿ, ಚಂದ್ರಹಾಸ ಶೆಟ್ಟಿ,ಸದಾನಂದ ಶೆಟ್ಟಿ, ಕುಮಾರ್, ಹಿಮಕರ ರಾವ್ ಉಪಸ್ಥಿತರಿದ್ದರು.

