ಮೂಡುಬಿದಿರೆ : ಕಡಂದಲೆ ನಲ್ಲೆಗುತ್ತು ಸಮೀಪದ ಶಾಂಭವಿ ನದಿಯಲ್ಲಿ ವೃದ್ಧರೊಬ್ಬರ ಶವವು ಪೊದೆಯಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ.

ಸಚ್ಚರಿಪೇಟೆ ಕೊರಗರ ಕಾಲನಿ ನಿವಾಸಿ ತನಿಯ (70ವ) ಎಂಬವರ ಶವವು ಪತ್ತೆಯಾಗಿದ್ದು, ಮೃತಪಟ್ಟು 8 ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತನಿಯ ಅವರ ಕುಟುಂಬವು ತೀರ ಬಡತನದಲ್ಲಿದ್ದರಿಂದ ಮೂಡುಬಿದಿರೆ ಪೊಲೀಸ್ ಉಪನಿರೀಕ್ಷ ದೇಜಪ್ಪ ಅವರು ಸಾಂತ್ವಾನ ಹೇಳಿ ಶವ ಸಂಸ್ಕಾರಕ್ಕೆ ಆರ್ಥಿಕ ನೆರವನ್ನು ನೀಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

By suddi9

Leave a Reply

Your email address will not be published. Required fields are marked *