ಮೂಡುಬಿದಿರೆ: ಗಾಂಧಿ ಜಯಂತಿಯ ಅಂಗವಾಗಿ ಮೂಡುಬಿದಿರೆಯ ಜ್ಯೋತಿನಗರದಲ್ಲಿರುವ ಗಾಂಧಿ ಜನ್ಮ ಶತಾಬ್ದಿ ಉದ್ಯಾನವನದಲ್ಲಿ ಗಾಂಧಿ ಪ್ರತಿಮೆಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಸುಪ್ರಿಯಾ ಡಿ.ಶೆಟ್ಟಿ, ರಾಜೇಶ್ ಕೋಟೆಗಾರ್, ಚಂದ್ರಹಾಸ ಸನಿಲ್, ಜೊಸ್ಸಿ ಮೆನೇಜಸ್, ಪಕ್ಷದ ಪ್ರಮುಖರಾದ ರಾಘು ಕೋಟ್ಯಾನ್, ಅನಿಲ್ ಲೋಬೋ, ಸುಶಾಂತ್ ಕರ್ಕೇರಾ, ಸುಂದರ್ ಪೂಜಾರಿ ಸಹಿತ ಪದಾಧಿಕಾರಿಗಳು, ನಾಯಕರು ಭಾಗವಹಿಸಿದರು.
