ಮೂಡುಬಿದಿರೆ: ತ್ರಿಭುವನ್ ಜ್ಯೂನಿಯರ್ ಛೇಂಬರ್, ಧವಲಾ ಕಾಲೇಜಿನ ರೆಡ್ಕ್ರಾಸ್ ಘಟಕ, ಎನ್ಎಸ್ಎಸ್ ಘಟಕ ಎನ್ಸಿಸಿ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ವತಿಯಿಂದ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ಸಹಕಾರದೊಂದಿಗೆ ರಕ್ತದಾನ ಶಿಬಿರವು ಶನಿವಾರ ಧವಳಾ ಕಾಲೇಜಿನಲ್ಲಿ ನಡೆಯಿತು.

ಧವಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ರವೀಶ್ ಕುಮಾರ್ ಶಿಬಿರವನ್ನು ಉದ್ಘಾಟಿಸಿ ರಕ್ತದಾನದ ಮಹತ್ವವನ್ನು ವಿವರಿಸಿದರು.
ತ್ರಿಭುವನ್ ಜೇಸಿಸ್ನ ಅಧ್ಯಕ್ಷೆ ಸಂಗೀತಾ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಲೇಡಿಗೋಷನ್ನ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಎಡ್ವರ್ಡ್ ಜೇಸಿಸ್ ಕೋಶಾಧಿಕಾರಿ ಹಮೀದ್, ಧವಳಾ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ರಾಹುಲ್, ಧವಳಾ ಕಾಲೇಜಿನ ರೆಡ್ಕ್ರಾಸ್ ಘಟಕದ ಅಧ್ಯಕ್ಷ ಸುದೀಪ್ ಬುನ್ನನ್ ಜೇಸಿಸ್ ಕಾರ್ಯದರ್ಶಿ ರಾಮಕೃಷ್ಣ, ಜೇಸಿರೇಟ್ ಅಧ್ಯಕ್ಷ ಶಾಂತಲಾ ಎಸ್ ಆಚಾರ್ಯ ಭಾಗವಹಿಸಿದರು.
