ವಿಟ್ಲ: ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ಇದರ ವಾರ್ಷಿಕ ಮಹಾಸಭೆಯು ಕಂಪೆನಿ ಅಧ್ಯಕ್ಷ ರಾಮಕಿಶೋರ್ ಕೆ ಇವರ ಅಧ್ಯಕ್ಷತೆಯಲ್ಲಿ ಚಂದಳಿಕೆ ಮಂಗಳಾ ಮಂಟಪದಲ್ಲಿ ನಡೆಯಿತು. ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪ್ರದೀಪ್ ಎಸ್ ವಾರ್ಷಿಕ ವರದಿ ವಾಚಿಸಿದರು. ಲೆಕ್ಕ ಪರಿಶೋದಕ ವೆಂಕಟಕೃಷ್ಣ ಲೆಕ್ಕಪತ್ರ ಮಂಡಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮನೋಜ್ ಪ್ರಸಾದ್ ಶೆಟ್ಟಿ, ನಿರ್ದೇಶಕರುಗಳಾದ ಸದಾನಂದ ಗೌಡ ಸೇರಾಜೆ, ಬಾಲಚಂದ್ರ ಕೇಪು, ಪ್ರೆಸಿಲ್ಲಾ ಡಿ ಸೋಜಾ, ಪುಷ್ಪಾ ಎಸ್ ಕಾಮತ್ ಮಂಚಿ, ಶ್ರೀವಾಸ ಭಟ್ ನಗ್ರಿ, ವಿಶ್ವನಾಥ ಅಳಿಕೆ, ಭಾಸ್ಕರ ಎಂ ಮಡಿಯಾಳ, ಜಯರಾಮ ರೈ ಬಿ, ಪದ್ಮನಾಭ ಶೆಟ್ಟಿ , ಕೊರಗಪ್ಪ ನಾಯ್ಕ, ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು. ಸಭೆಯಲ್ಲಿ ರಾಜಾರಾಮ ಭಟ್ ಸಿ ಜಿ ಸ್ವಾಗತಿಸಿದರು. ಲಕ್ಷ್ಮೀನಾರಾಯಣ ಅಡ್ಯಂತಾಯ ವಂದಿಸಿದರು.
