ವಿಟ್ಲ:ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಅರಣ್ಯ ಇಲಾಖೆ ಪುತ್ತೂರು ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವಕಾರ್ಯಕ್ರಮ ಜು.23 ಶನಿವಾರ ಶಾಲಾ ಪರಿಸರದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ನಡೆಯಿತು.ಕಾರ್ಯಕ್ರಮದಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದಜಗನ್ನಾಥಕಾಸರಗೋಡು ವಹಿಸಿದ್ದರು. ಸಸಿ ವಿತರಣೆಮಾಡುವ ಮೂಲಕ ಪಟ್ಟಣ ಪಂಚಾಯತ್ಅಧ್ಯಕ್ಷರಾದಅರುಣ್ ವಿಟ್ಲ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಉಪವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಆಚಾರ್ಯ ಭಾಗವಹಿಸಿ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆಕರೆನೀಡಿದರು.ಕಾರ್ಯಕ್ರಮದಲ್ಲಿಆರ್ ಕೆ ಆಟ್ರ್ಸ್ನರಾಜೇಶ್ ವಿಟ್ಲ ಭಾಗವಹಿಸಿದ್ದರು.ಮುಖ್ಯೋಪಾಧ್ಯಾಯರಾದ ವಿಶ್ವನಾಥ ಬಿ ಸ್ವಾಗತಿಸಿದರು.ಅರಣ್ಯಇಲಾಖೆಯ ಪಿ ವಿ ಆನಂದ ಧನ್ಯವಾದವಿತ್ತರು.ಸಹಶಿಕ್ಷಕರಾದ ದಯಾನಂದಎನ್ಕಾರ್ಯಕ್ರಮ ನಿರೂಪಿಸಿದರು.

