Published On: Wed, Apr 25th, 2018

ಬಿಜೆಪಿ ವಿರುದ್ಧ ನಡೆಯುವುದಿಲ್ಲ: ಸತ್ಯಜಿತ್ ಸುರತ್ಕಲ್

sattt

ಸುರತ್ಕಲ್: ಗುರುಪುರ ಸ್ವಾಮೀಜಿಗಳ ಮಾತಿಗೆ ಗೌರವ ನೀಡಿ ಸ್ವರ್ಧೆಯಿಂದ ಹಿಂದೆ ಸರಿದಿದ್ದೇನೆ. ಪಕ್ಷದ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ವರಿಷ್ಠರ ನಡೆಗೆ  ಅಸಮಾಧಾನಗೊಂಡಿರುವ ಸತ್ಯಜಿತ್ ಸುರತ್ಕಲ್, ಮಂಗಳವಾರ ಮಾತುಕತೆಗೆ ಬರುವುದಾಗಿ ಹೇಳಿದ್ದ ಪಕ್ಷದ ವರಿಷ್ಠರು, ಬಾರದೆ ನಿರ್ಲಕ್ಷ್ಯ ಧೋರಣೆ ತಳೆದಿದ್ದು, ಇದರಿಂದ ನನಗೆ ನೋವುಂಟಾಗಿದೆ. ಹೀಗಾಗಿ ನಾನು ಬಿಜೆಪಿ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಇದು ನನ್ನ ವೈಯಕ್ತಿಕ ನಿರ್ಧಾರವಾಗಿದ್ದು, ನನ್ನ ಕಾರ್ಯಕರ್ತರು, ಅಭಿಮಾನಿಗಳು, ಅವರದೇ ನಿರ್ಧಾರ ಕೈಗೊಳ್ಳುವಲ್ಲಿ ಸ್ವತಂತ್ರರು ಎಂದಿದ್ದಾರೆ.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter