ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸ್ವಂತ ವಾಹನದಲ್ಲಿ ಆಗಮಿಸುವ ಭಕ್ತರಿಗೆ ಪೊಳಲಿಯ ಸಮೀಪ ಸುಮಾರು 22 ಎಕ್ರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತರಿಗೆ ಯಾವುದೇ ಅಡಚಣೆಯಾಗಂತೆ ಸ್ವಯಂಸೇವಕರ ತಂಡ ಸಕಲ ಸಿದ್ಧತೆ ನಡೆಸಿದೆ.
ಏಕಕಾಲದಲ್ಲಿ ಬರೋಬ್ಬರಿ 15000 ವಾಹನಗಳು ನಿಲ್ಲಲು ಒಟ್ಟು 9 ವಿಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ವಿಭಾಗದಲ್ಲಿ ಸುಮಾರು 1500 ವಾಹನಗಳು ತಂಗಲು ವ್ಯವಸ್ಥೆ ಇದೆ. ಅಲ್ಲದೆ ದ್ವಿಚಕ್ರ, ಚತುಷ್ಚಕ್ರ ಹಾಗು ಘನ ವಾಹನಗಳಿಗೆ ತಂಗಲು ಪ್ರತ್ಯೇಕ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

9vp parking-2 ಮಾ.8ರಂದು ಒಂದೇ ದಿನ ಒಟ್ಟು 15000 ವಾಹನಗಳು ತಂಗುವ ಮೂಲಕ ಹೊಸ ದಾಖಲೆ ಸೃಷ್ಟಿಯಾದಂತಾಗಿದ್ದು, ಬ್ರಹ್ಮಕಲಶಾಭಿಷೇಕದ ದಿನದಂದು ವಾಹನಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಒಟ್ಟು ವಾಹನ ಪಾರ್ಕಿಂಗ್‍ನಲ್ಲಿ 150 ಸ್ವಯಂಸೇವಕರು ನಿರಂತರ ಸೇವೆ ಸಲ್ಲಿಸುತ್ತಿದ್ದು ಶುಭಲಕ್ಷ್ಮೀ ಬಸ್ಸ್ ಮಾಲಕರಾದ ಭುವನೇಶ್ ಪಚ್ಚಿನಡ್ಕ ಅವರು ಜವಾಬ್ದಾರಿ ವಹಿಸಿಕೊಂಡಿದ್ದು ಇವರೊಂದಿಗೆ ರಾಮಚಂದ್ರ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ಹಾಗು ಹರೀಶ್ ಶೆಟ್ಟಿಯವರು ಕಾರ್ಯ ನಿರ್ವಹಿಸುತ್ತಿದ್ದು ಅಲ್ಲದೆ 150 ಯುವಕರು ವಾಹನಗಳನ್ನು ನಿಯಂತ್ರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪ್ರತಿದಿನ ರಸ್ತೆಯಲ್ಲಿ ಧೂಳಾಗದಂತೆ ಮೂರು ಟ್ಯಾಂಕರ್‍ಗಳಲ್ಲಿ ನೀರು ಸಿಂಪಡಿಸಲಾಗುತ್ತಿದೆ. ನಡೆದಾಡಲು ಕಷ್ಟವಾಗುವವರಿಗೆ ಪಾರ್ಕಿಂಗ್ ಸ್ಥಳದಿಂದ ದೇವಸ್ಥಾನದವರೆಗೆ ತಲುಪಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

9vp parking-3
ಬ್ರಹ್ಮಕಲಶೋತ್ಸವದ ಹಲವು ಸಮಿತಿಯ ಅಧ್ಯಕ್ಷರು-ಪದಾಧಿಕಾರಿಗಳ ಮಧ್ಯೆ ನಿರಂತರ ಸಂವಹನ ನಡೆಸಲು ವಾಕಿಟಾಕಿ ವ್ಯವಸ್ಥೆ ಮಾಡಲಾಗಿದ್ದು, ಒಬ್ಬೊರಿಗೊಬ್ಬರು ಪರಸ್ಪರ ವಿಚಾರಣೆ ನಡೆಸುತ್ತಾ ನಿರಂತರ ಸಂಪರ್ಕದಲ್ಲಿದ್ದಾರೆ. ಬಸ್‍ಗಳಲಿ ಬರುವ ಭಕ್ತರಿಗೆ ಪೊಳಲಿ ದ್ವಾರದ ಸಮೀಪ ಬಸ್ ತಂಗುದಾಣ ವ್ಯವಸ್ಥೆ ಮಾಡಲಾಗಿದ್ದು, ಕುಳಿತುಕೊಳ್ಳಲು ಶ್ಯಾಮಿಯಾನ, ಕುಡಿಯಲು ನೀರು, ಚಹಾ-ತಿಂಡಿ ವ್ಯವಸ್ಥೆ ಮಾಡಲಾಗಿದೆ.

9vp parking-1
ಎಂಟ್ರೆನ್ಸ್-ಎಕ್ಸಿಟ್
ಪೊಳಲಿ ದ್ವಾರದ ಸಮೀಪದಿಂದ ಪಾರ್ಕಿಂಗ್ ಸ್ಥಳಕ್ಕೆ ವಾಹನಗಳು ಪ್ರವೇಶಿಸಲು ಅವಕಾಶ ಕಲ್ಪಿಸಿದರೆ ಕಲ್ಕುಟ-ಪುಂಚಮೆ ರಸ್ತೆಯಲ್ಲಿ ಬಿ.ಸಿ. ರೋಡ್ ಮಂಗಳೂರಿಗೆ ಸಂಚರಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಲ್ಲಿ ಪೊಲೀಸರು, ಹೋಮ್‍ಗಾಡ್ರ್ಸ್, ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿದೆ. ಮಳಲಿ-ಕಾಜಿಲದಿಂದ ಬರುವ ಭಕ್ತರಿಗೆ ಫಲ್ಗುಣಿ ನದಿಯಿಂದ ಯಾಂತ್ರೀಕೃತ ಬೋಟ್‍ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ನದಿ ತಟದಲ್ಲಿ ವಾಹನಗಳನ್ನು ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪೊಲೀಸ್ ಇಲಾಖೆಯೂ ಸಖಲ ಸನ್ನದ್ಧ ಸ್ಥಿತಿಯಲ್ಲಿದ್ದು ಪೊಲೀಸರಿಗೆ ಸ್ವಯಂಸೇವಕರು ಸರ್ವ ರೀತಿಯಲ್ಲಿ ಸಾಥ್ ನೀಡಿದ್ದಾರೆ.

`ವಾಹನಗಳಲ್ಲಿ ಬರುವ ಭಕ್ತರಿಗೆ ಯಾವುದೇ ಅಡಚಣೆಯಾಗದಂತೆ ಪೊಳಲಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರು ಯಾವುದೇ ರೀತಿಯ ಗೊಂದಲಕ್ಕೊಳಗದೆ ನಿಶ್ಚಿಂತರಾಗಬಹುದು. ಸ್ವಯಂಸೇವಕರ ಸೂಚನೆಗಳನ್ನು ಪಾಲಿಸಿದರೆ ಯಾವುದೇ ಅಡಚಣೆಯಾಗಲು ಸಾಧ್ಯವಿಲ್ಲ.’
ಭುವನೇಶ್ ಪಚ್ಚಿನಡ್ಕ, ಪಾರ್ಕಿಗ್ ಸಮಿತಿ ಅಧ್ಯಕ್ಷರು

 

By suddi9

Leave a Reply

Your email address will not be published. Required fields are marked *