ಎಸ್.ಡಿ.ಎಮ್ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಕೇಂದ್ರ ವಾಮಂಜೂರು. ಇಲ್ಲಿಯ ಶಿಕ್ಷಕರ ದಿನಾಚರಣೆಯು ದಿನಾಂಕ 05.09.2017 ರಂದು ವಿದ್ಯಾರ್ಥಿಗಳಿಂದ ಆಯೋಜಿಸಲಾಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಯುತ ಗಣೇಶ್ ಭಟ್ ವಿ ಇವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಹಿತಿ ಮತ್ತು ಜ್ಞಾನದ ಬಗೆಗಿರುವ ವ್ಯತ್ಯಾಸವನ್ನು ಹೇಳಿ ಅದೇ ರೀತಿಯಾಗಿ ಗುರು ಮತ್ತು ಶಿಷ್ಯರ ಸಂಬಂಧವನ್ನು ಸಾಂದರ್ಭಿವಾಗಿ ವಿವರಿಸಿದರು. ವೇದಿಕೆಯಲ್ಲಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ನರೇಂದ್ರ ಪ್ರಾಸ್ತವಿಸಿದರು.ತರಬೇತಿ ಅಧಿಕಾರಿಯಾದ ಶ್ರೀಮತಿ ಫ್ಲೇವಿಯಾ ಡಿಸೋಜ ಹಾಗೂ ಎಲ್ಲಾ ಕಿರಿಯ ತರಬೇತಿ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಎನಿಮೇಶನ್ ವಿಭಾಗದ ವಿದ್ಯಾರ್ಥಿನಿ ಕುಮಾರಿ ಜಯಲಕ್ಷಿ ಸ್ವಾಗತಿಸಿದರು. ಎಮ್.ಎಮ್.ವಿ ವಿಭಾಗದ ವಿದ್ಯಾರ್ಥಿ ಭರತ್ ಕುಮಾರ್ ನಿರೂಪಿಸಿÀದರು
