ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ “ವಿಶ್ವ ಕ್ಯಾನ್ಸರ್ ದಿನ” ಪ್ರಯುಕ್ತ ಒಂದು ವಾರದ ಕ್ಯಾನ್ಸರ್ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಅಭಿಯಾನವನ್ನು, ಉಪನ್ಯಾಸ ಮತ್ತು ನಿಧಿ ಸಂಗ್ರಹ ಕಾರ್ಯಕ್ರಮದ ಮೂಲಕ ನಡೆಸಲಾಯಿತು. ಕ್ಯಾನ್ಸರ್ ರೋಗಿಗಳಿಗೆ ಧನ ಸಹಾಯ ಮಾಡಲು ದೇಣಿಗೆ ಸಂಗ್ರಹಿಸುವ ವಿಧಾನವು ವಿನೂತನವಾಗಿತ್ತು. ಹಣದ ಬದಲಾಗಿ ಹಳೇ ಕಾಗದ ಮತ್ತು ಪತ್ರಿಕೆಗಳನ್ನು ವಿದ್ಯಾರ್ಥಿ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದಿಂದ ಒಟ್ಟು 3,500 ಕೆ.ಜಿ. ಯಷ್ಟು ಹಳೆ ಪತ್ರಿಕೆಗಳನ್ನು ಸಂಗ್ರಹಿಸಿ ಇದರಿಂದ ಬಂದ ಹಣವನ್ನು ದೇಣಿಗೆ ನಿಧಿಗೆ ನೀಡಲಾಯಿತು. ಈ ಅಭಿಯಾನದ ಕೊನೆಯಲ್ಲಿ “ಪ್ರಿವೆಂಟಿವ್ ಕ್ಯಾನ್ಸರ್” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

IMG_5365
ಸಂಪನ್ಮೂಲ ವ್ಯಕ್ತಿಯಾಗಿ ಫಾ| ಮುಲ್ಲರ್ ಮೆಡಿಕಲ್ ಕಾಲೇಜ್, ಮಂಗಳೂರು ಕಮ್ಯೂನಿಟಿ ಮೆಡಿಸಿನ್ ವಿಭಾಗದ ಡಾ| ಒಲಿವರ್ ಡಿ’ಸೋಜ, ಇವರು ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಅಬ್ದುಲ್ ಶರೀಫ್‍ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶೈಕ್ಷಣಿಕ ನಿರ್ದೇಶಕರಾದ  ಸರ್ಫಾಝ್ ಹಾಶಿಂ ಜೆ., ಎಂ.ಬಿ.ಎ. ವಿಭಾಗದ ನಿರ್ದೇಶಕರಾದ ಡಾ| ಬೀರಾನ್ ಮೊೈದೀನ್, ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ| ಪಾಲಕ್ಷಪ್ಪ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿಗಳಾದ . ಮುಸ್ತಾಫ ಖಲೀಲ್ ಮತ್ತು . ಮನ್ಸೂರ್, ಅಭಿಯಾನ ಸಂಯೋಜಕರಾದ ಪ್ರೋ.ನಬೀಲ್ ಮತ್ತು  ಸಯ್ಯದ್ ಅಮೀನ್, ರಾಷ್ಟ್ರೀಯ ಸೇವಾ ಯೋಜನಾ ಘಟಕ ನಾಯಕ ಶಫಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಮಿಖ್ದಾದ್, ಖಿರಾಅತ್ ಪಠಿಸುವ ಮೂಲಕ ಕಾರ್ಯಕ್ರಮ ಆರಂಭಿಸಿದರು. ವಿದ್ಯಾರ್ಥಿಗಳಾದ ಕು| ಹಫ್ಸಾ ಸ್ವಾಗತಿಸಿ, ರಝಾಕ್ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿ ಅಫೀಫ್ ಕಾರ್ಯಕ್ರಮವನ್ನು ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *