ವಿಟ್ಲ: ವಿಟ್ಲ ಕಸ್ಬಾ ಗ್ರಾಮದ ಕೂಡೂರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಶನ್ಶೈನ್ ಡ್ಯಾನ್ಸ್ ಗ್ರೂಪ್ ವಿಟ್ಲ ಮತ್ತು ಕೂಡೂರು ಸೇರಾಜೆ ನಾಗರಿಗಕರ ಹಾಗೂ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುರ್ಶನ ಪಡಿಯಾರ್ ಇವರ ಸಹಕಾರದಿಂದ ಮೂವತ್ತು ಸಾವಿರ ರೂಪಾಯಿ ವೆಚ್ಚದ ಧ್ವನಿ ವರ್ದಕವನ್ನು ನೀಡಲಾಯಿತು.
ಧೆವಸ್ಥಾನದ ಮೊಕ್ತೇಸರರಾದ ಕೂಡೂರುಗುತ್ತು ಡಾ| ರಮಾನಂದ ಶೆಟ್ಟಿ ಇವರಿಗೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಲ್ ಎನ್ ಕೂಡೂರು ಧ್ವನಿ ವರ್ದಕವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಸಂತ ಶೆಟ್ಟಿ ಕೂಡೂರು, ಮೋನಪ್ಪ ಗೌಡ ಸೇರಾಜೆ, ಚಂದ್ರ ನಾಯ್ಕ ಸೇರಾಜೆ, ಮಂಜುನಾಥ ಸೇರಾಜೆ, ಕಿರಣ್ ಶೆಟ್ಟಿ ಕೂಡೂರುಗುತ್ತು ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು.

