ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧಾರದ ಕಾಮಗಾರಿಯು ಪ್ರಗತಿಯಲ್ಲಿದ್ದು ಅಂತ ಅಂತವಾಗಿ ಕಾಮಗಾರಿಯು ನಡೆಯುತ್ತಿದ್ದು ದೇವಳದ ಗರ್ಭಗುಡಿಗೆ ಅಗತ್ಯವಿರುವ ಮರ ಹಾಗೂ ಮರದ ಸಾಮಗ್ರಿಗಳು ಮಾ.6 ರಂದು ಭಾನುವಾರ ಬೆಳಗ್ಗೆ 11.30ಕ್ಕೆ ದೇವಳಕ್ಕೆ ಮೆರವಣಿಗೆಯಲ್ಲಿ ಬಂದ ಮರದ ಸಾಮಾಗ್ರಿಗಳು.

ದೇವಳದ ಆಡಳಿತ ಮಂಡಳಿ ಹಾಗೂ ದೇವಳದ ಅರ್ಚಕರು ಬರಮಾಡಿಕೊಂಡು ಕೆತ್ತನೆ ಕೆಲಸದ ದಾರುಶಿಲ್ಪ ಮೂಹೂರ್ತ ನೆರವೇರಿತು. ಈ ಕಾರ್ಯಕ್ರಮದಲ್ಲಿ ಅನುವಂಶಿಕ ಮೊಕ್ತೇಸರರು, ಕಾರ್ಯನಿರ್ವಹಣಾಧಿಕಾರಿ, ತಂತ್ರಿಗಳು,ಅರ್ಚಕರು, ಸಿಬ್ಬಂದಿವರ್ಗ ಹಾಗೂ ಊರ ಹತ್ತು ಸಮಸ್ತರು ಬಾಗಿಯಾಗಿ ದೇವರ ಪ್ರಸಾದ ಸ್ವೀಕರಿಸಿದರು.
