ಮಂಗಳೂರು: ಗ್ರಾಹಕರೊಂದಿಗೆ ವಿಶ್ವಾಸಭರಿತವಾಗಿ ವ್ಯವಹಾರ ನಡೆಸಿದರೆ ಉದ್ಯಮದಲ್ಲಿ ಯಶಸ್ಸುಗಳಿಸಲು ಸಾಧ್ಯವಿದೆ ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ತಿಳಿಸಿದರು.


ಕದ್ರಿ ಗೋರಕ್ಷನಾಥ ಜ್ಞಾನ ಮಂದಿರದ ಬಳಿ ಮುಖ್ಯಪ್ರಾಣ ಚಿಟ್ಸ್ ಪ್ರೈ.ಲಿಮಿಟೆಡ್ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಮಹಾಬಲ ಮಾರ್ಲ, ಕಾಪರ್ೊರೇಟರ್ ರೂಪಾ ಡಿ.ಬಂಗೇರ , ತುಳುಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಎ.ಕೋಟ್ಯಾನ್ , ಪತ್ರಕರ್ತ ವಾಲ್ಟರ್ ನಂದಳಿಕೆ, ಕಲಾವಿದರಾದ ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರು, ಸಂಸ್ಥೆಯ ಪಾಲುದಾರರಾದ ದಯಾ ಕಿರೋಡಿಯನ್, ಚಂದ್ರಹಾಸ ಹೆಗ್ಡೆ, ಮಂಜುನಾಥ ಗೌಡ, ಸುಧೀರ್ ಭಂಡಾರಿ, ನಿತಿನ್ ಶೆಟ್ಟಿ ಉಪಸ್ಥಿತರಿದ್ದರು. ಕನರ್ೂರ್ ಮೋಹನ್ ರೈ ಸ್ವಾಗತಿಸಿದರು. ದಯಾನಂದ ಕತ್ತಲ್ಸಾರ್ ಕಾರ್ಯಕ್ರಮ ನಿರ್ವಹಿಸಿದರು.



