ಬಂಟ್ವಾಳ:” ಸಹಕಾರ ರತ್ನ” ಪ್ರಶಸ್ತಿ ಪುರಸಕೃತರಾದ ಟಿ.ಜಿ.ರಾಜಾರಮ ಭಟ್ ಅವರನ್ನು ಶ್ರೀ ಷಣ್ಮುಖ ಸುಬ್ರಮಣ್ಯ ದೇವಸ್ಥಾನದ ವತಿಯಿಂದ ಅಭಿನಂದಿಸಲಾಯಿತು.ಸರಳ ಸಮಾರಂಭದ ಅಧ್ಯಕ್ಷತೆಯನ್ನು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರಭಟ್ ವಹಿಸಿದ್ದರು.

ಸಜಿಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ನೌಕಾ ಸೇನೆಯ ನಿವೃತ್ತ ಕಮಾಂಡರ್ ವಸಂತ ರಾವ್, ಪಾಣೆಮಂಗಳೂರು ರೈ. ಸೇ. ಸ. ಸಂಘದ ಅಧ್ಯಕ್ಷ ಜಯಶಂಕರ ಬಾಸ್ರೀತ್ತಾಯ,ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ರಾಧಾಕೃಷ್ಣ ಆಳ್ವ,ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಪ್ರವೀಣ್ ಆಳ್ವ,ಸತ್ಯನಾರಾಯಣ ನಾಯಕ್ ,ಕಿಶನ್ ಸೇಣವ, ವಿಟ್ಟಲ ಅಮೀನ್ ,ಪ್ರಮೋದ್ ಮೊದಲಾದವರು ಉಪಸ್ಥಿತರಿದ್ದರು
