ಬಂಟ್ವಾಳ: ಪಂಚ ಗ್ಯಾರಂಟಿ  ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು , ತಾಲೂಕು ಪಂಚಾಯಿತಿ ಬಂಟ್ವಾಳ ಹಾಗೂ ಇರ್ವತ್ತೂರು ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಕೋಳಲಬಾಕಿಮಾರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ  ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ತಾಲೂಕು ಪಂಚಾಯತ್  ಕಾರ್ಯನಿರ್ವಹಣಾ ಅಧಿಕಾರಿ ಸಚಿನ್ ಕುಮಾರ್  ಅವರು ಉದ್ಘಾಟಿಸಿ ಮಾತನಾಡಿ, ಪರಿಸರ ರಕ್ಷಣೆ  ನಮ್ಮೆಲ್ಲರ ಹೊಣೆಯಾಗಿದೆ ಎಂದರು


ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷೆ ಜಯಂತಿ ವಿ.ಪೂಜಾರಿ  ಅವರು ವಹಿಸಿ ಮಾತನಾಡಿ, ಪರಿಸರವನ್ನು ಉಳಿಸಿ, ಬೆಳೆಸುವುದಕ್ಕಾಗಿ ಎಲ್ಲರ ಸಹಕಾರದ ಅಗತಗತವಿದೆ ಎಂದರು.  

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸಮಿತಿ ಸದಸ್ಯರಾದ ಹರ್ಸನ್, ಚಂದ್ರಶೇಖರ್ ,ಸುಧೀಂದ್ರ ಶೆಟ್ಟಿ , ಇರ್ವತ್ತೂರು ಗ್ರಾ. ಪಂ. ಅಧ್ಯಕ್ಷರಾದ  ಮಾಲತಿ , ಸದಸ್ಯರಾದ ದಯಾನಂದ ನಾಯ್ಕ್ , ವಿಜಯ್, ಪ್ರಶಾಂತ ಜೈನ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿಶಾಂತ್ ಬಿ.ಆರ್, ಕೊಳಲಬಾಕಿಮಾರು ಶಾಲೆಯ ಎಸ್ ಡಿಎಂಸಿ ಅಧ್ಯಕ್ಷೆ  ವಿಮಲಾ ಹಾಗೂ ಸರ್ವ ಸದಸ್ಯರು, ಸ್ಥಳೀಯ ಪ್ರಮುಖರಾದ  ಕೊರಗ ಶೆಟ್ಟಿ, ಬಿ.ಆರ್. ಅಂಚನ್ ,ಮಂಜುನಾಥ ಪೂಜಾರಿ,  ಚೆನ್ನೈತೋಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ವನಿತಾ ಮೊದಲಾದವರು ಉಪಸ್ಥಿತರಿದ್ದರು .
ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ  ರಾಜೇಶ .ಕೆ  ಸ್ವಾಗತಿಸಿದರು.  ಶಿಕ್ಷಕಿ  ನಿಕಿತಾ  ವಂದಿಸಿದರು.
ಶಾಲೆಯ  ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.  

By suddi9

Leave a Reply

Your email address will not be published. Required fields are marked *