ಕೊರೋನಾ ಸಂದರ್ಭದಲ್ಲಿ ನಗರ ಬಿಟ್ಟು ಹಳ್ಳಿ ಸೇರಿದ ಚಂದನ್ ಪ್ರಗತಿಪರ ರೈತನಾಗುವ ಆಸೆಯಿಂದ ವಿಶಿಷ್ಟವಾಗಿ ಬೇಸಾಯ ಮಾಡಬೇಕೆಂದು ಹೊರಟು ಗುಲಾಬಿ ಹೂವುಗಳನ್ನು ಬೆಳೆಯಲು ಪ್ರಾರಂಭಿಸಿದರು. ಇಂದು ನಮ್ಮ ಹಳ್ಳಿ ರೈತರು ಕೆಲವೇ ಕೆಲವು ಬೆಳೆಗಳಿಗೆ ಸೀಮಿತವಾಗಿ ಬೆಳೆದು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಹಣ ಕಳೆದುಕೊಂಡು ಕೈಚೆಲ್ಲಿ ಕುಳಿತಿದ್ದಾರೆ, ಆದರೆ ಇವೆಲ್ಲವಕ್ಕೂ ಭಿನ್ನವಾಗಿ ಚಂದನ್ ಗುಲಾಬಿ ಹೂಗಳನ್ನು ಬೆಳೆದರು. ಇದಕ್ಕಾಗಿ ಅವರು ಹಾಕಿದ ಬಂಡವಾಳ 7 ಲಕ್ಷ ರೂಪಾಯಿಗಳು ಕೆಲವೇ ಕೆಲವು ತಿಂಗಳ ಹಿಂದೆ ಹಾಕಿದ ಬಂಡವಾಳಕ್ಕೆ ಇಂದು ಪ್ರತಿದಿನ ಎಂಟರಿಂದ ಹತ್ತು ಸಾವಿರ ಸಂಪಾದನೆ ಮಾಡುತ್ತಿದ್ದಾರೆ.

                                                                                                    Hasana

By suddi9

Leave a Reply

Your email address will not be published. Required fields are marked *