ಮಂಗಳೂರು: ಸಾಮಾಜಿಕ ಕಳಕಳಿಯೊಂದಿಗೆ ವಿದ್ಯಾರ್ಥಿ ಜೀವನದ ನೈಜತೆಯನ್ನು ಒಳಗೊಂಡ ಉಂಡಾಡಿಗುಂಡ ಕಿರುಚಿತ್ರ ಅ.೨೭ ರಂದು ಪ್ರೀಮಿಯರ್ ಶೋ ನಡೆಯಲಿದೆ.
ಈ ಕಿರುಚಿತ್ರ ಈಗಾಗಲೇ ಸನ್ ಸೆಟ್ನಲ್ಲಿ ಮೆಚ್ಚುಗೆಯನ್ನು ಪಡೆದಿದೆ. ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಹಾಗೂ ಹಲವು ಪ್ರಶಸ್ತಿಗಳಿಗಾಗಿ ರವಾನೆಗೊಂಡಿದೆ ಎಂದು ಸಂದೇಶ್ ರೈ ಹೇಳಿದ್ದಾರೆ.
ಆರ್.ಕೆ. ಮಂಗಳೂರು ಛಾಯಗ್ರಾಹಣದಲ್ಲಿ ಮೂಡಿಬಂದ ಚಿತ್ರ ಇದಾಗಿದ್ದು ಕೇರಳ ಮೂಲದ ಯುವ ನಿರ್ದೇಶಕರಾದ ರಂಜಿತ್ ಆಕ್ಷನ್ ಕಟ್ ನೀಡಿದ್ದಾರೆ. ಸಿನಿಮಾಗೆ ವೀರೇಂದ್ರ ಸುವರ್ಣ ನಿರ್ಮಾಪಕರಾಗಿ ಸಹಕರಿಸಿದ್ದಾರೆ. ನ.೨೭ ರಂದು ೧೦ಗಂಟೆಗೆ ಕಿನ್ನಿಗೋಳಿಯ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪ್ರೀಮಿಯರ್ ಶೋ ನಡೆಯಲಿದೆ. ನ.೨೮ ರಂದು ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
