ಬಂಟ್ವಾಳ: ಮೂಡುಬಿದ್ರೆ ಮುಖ್ಯ ರಸ್ತೆ ನಡುವಿನ ಪ್ರಸಿದ್ಧ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಇಲ್ಲಿನ ಧಾರ್ಮಿಕ ಮುಂದಾಳು ರವಿಶಂಕರ ಶೆಟ್ಟಿ ಬಡಾಜೆಗುತ್ತು ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಹರೀಶ ಶೆಟ್ಟಿ ಪಡು, ಸುರೇಂದ್ರ ಪೆದಮಲೆ, ಕೇಶವ ಕುಂಜರಬೆಟ್ಟು, ವಿಶ್ವನಾಥ ಅಮ್ಟಾಡಿ, ಜಗದೀಶ ಭಂಡಾರಿ ಕೂರಿಯಾಳ, ಚೇತನಾ ಕೂರಿಯಾಳ, ತ್ರಿವೇಣಿ ಪೆದಮಲೆ ಹಾಗೂ ಪ್ರಧಾನ ಅರ್ಚಕರಾಗಿ ಕೃಷ್ಣ ಅರಳಿತ್ತಾಯ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
