ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ಮಂಜಲ್ ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ದಲ್ಲಿ ವರ್ಷಂಪ್ರತಿಯಂತೆ ಲಕ್ಷದೀಪೋತ್ಸವದ ಅಪ್ರಯುಕ್ತ ಶ್ರೀ ದೇವರಿಗೆ ಫಲಪಂಚಾಮೃತ ಅಭಿಷೇಕ, ಪವಮಾನ ಸೂಕ್ತ ಅಭಿಷೇಕ, ಪ್ರಸನ್ನ ಪೂಜೆ ಕಲ್ಪೋಕ್ತ ಪೂಜೆ ಮಹಾಮಂಗಳಾರತಿ ಶ್ರದ್ಧಾಭಕ್ತಿಯಿಂದ ಜರುಗಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣ ಶಾಮ್. ಸಜೀಪಮುನ್ನೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವ ಗುಂಡಪ್ಪ ಬಿರಾದಾರ. ಬಿ ಕೇಶವ ಭಟ್. ಎo ಸುಬ್ರಹ್ಮಣ್ಯ ಭಟ್. ಕೆ ನಾರಾಯಣ ಐತಾಳ, ಸಂತೋಷ,ಗಣೇಶ.ಗೀತೇಶ್ ಗಟ್ಟಿ, ಮನೋಜ್ ಆಳ್ವ,ಕುಸುಮ,ಪ್ರಮೀಳಾ ಗಟ್ಟಿ, ನರೇಂದ್ರ ಆಳ್ವ,ಪುರಂದರ,ಚಂದ್ರಶೇಖರ, ಯಶವಂತ ಗಟ್ಟಿ,ವಿಶ್ವನಾಥ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.ಇದೇ ವೇಳೆ ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಭಜನಾ ಮಂಡಳಿ ಹಾಗೂ ಶಾರದಾ ಅಂಬಿಕಾ ಭಜನಾ ಮಂಡಳಿ ವರಿಂದ ಭಜನಾ ಸಂಕೀರ್ತನ ನಡೆಯಿತು.
